×
Our website is made possible by displaying online advertisements to our visitors. Please consider supporting us by whitelisting our website.
  • 9880645340

ದೈವನರ್ತಕ ಗುಡ್ಡಪಾನರ ರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ

ಕಾಪು: ದೈವ ನರ್ತಕ ಗುಡ್ಡಪಾನರ ಇವರಿಗೆ ಜಾನಪದ ವಿಭಾಗದಲ್ಲಿ 2022ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾಗಿದ್ದು ಈ ಪ್ರಶಸ್ತಿ ಗೌರವರ್ಪಣೆ ನಡೆಯಿತು.
ಗೌರವ ಸ್ವೀಕರಿಸಿ ಮಾತನಾಡಿದ ಗುಡ್ಡಪಾನರ ” ಈ ಪ್ರಶಸ್ತಿಯ ಹಿಂದೆ ಡಾ. ವೈ ಎನ್ ಶೆಟ್ಟಿ ಮತ್ತು ಕಿಶನ್ ಶೆಟ್ಟಿ ಬಿಕ್ರಿಗುತ್ತು ಹಾಗೂ ನಮ್ಮ ಊರಿನ ಗ್ರಾಮಸ್ಥರಾದ ಸರ್ವೇಶ್ವರ ಫ್ರೆಂಡ್ಸ್ ನ ಎಲ್ಲಾ ಯುವಕರು ಶ್ರಮವಹಿಸಿದ್ದು ಈ ಪ್ರಶಸ್ತಿಯ ಹಿಂದಿನ ಶ್ರಮ ಅಪಾರವಾಗಿದೆ , ನನ್ನ ಈ ಸೇವೆಯನ್ನ ಗುರುತಿಸಿ ಸರ್ಕಾರ ಈ ಪ್ರಶಸ್ತಿ ನೀಡಿರುವುದು ಅತ್ಯಂತ ಸಂತಸವಾಗಿದೆ ಎಂದರು. ಈ ಸಂದರ್ಭ ಉಡುಪಿ ಜಿಲ್ಲಾ ಬಿಜೆಪಿ ಮುಖಂಡ ಶ್ರೀಶ ನಾಯಕ್ ಪೆರ್ಣಂಕಿಲ ಇವರು ಪ್ರಶಸ್ತಿ ವಿಜೇತ ಗುಡ್ಡ ಪಾಣಾರ ಮನೆಗೆ ಭೇಟಿ ನೀಡಿ ಗೌರವಿಸಿದರು. ಫಲಪುಷ್ಪ ,ಹೂ ಹಾರ ಹಾಕಿ ಸಮ್ಮಾನಿಸಿದರು.ಬಳಿಕ ಮಾತನಾಡಿ ಅರ್ಹ ವ್ಯಕ್ತಿಗಳಿಗೆ ಪ್ರಶಸ್ತಿ ಗಳು ಹುಡುಕಿ ಕೊಂಡು ಮನೆಗೆ ಬರುವ ಕಾಲ ಬಂದಿದೆ. ನಮ್ಮ ಸರ್ಕಾರದ ಆಡಳಿತದ ಅವಧಿಯಲ್ಲಿ ಪ್ರಶಸ್ತಿಗಳನ್ನು ಯಾರಿಗೆ ಸಲ್ಲಬೇಕೋ ಅವರಿಗೆ ಹುಡುಕಿ ಕೊಡುವ ಮೂಲಕ ಪ್ರಶಸ್ತಿಗೆ ಅರ್ಹ ವ್ಯಕ್ತಿಗಳು ಪ್ರಶಸ್ತಿಗಳನ್ನು ಪಡಕೊಂಡಿದ್ದಾರೆ. ಕಳೆದ ೩೮ ವರ್ಷಗಳಿಂದ ದೈವ ನರ್ತನ ಸೇವೆ ಮಾಡಿಕೊಂಡಿರುವ ಗುಡ್ಡ ಪಾಣಾರ ಈ ಭಾಗದಲ್ಲಿ ಚಿರಪರಿಚಿತರು. ಅದರಲ್ಲೂ ಕಾಪು ಜಗತ್ಪ್ರಸಿದ್ಧ ಪಿಲಿಕೋಲ(ಹುಲಿ ಕೋಲ) ದೈವ ನರ್ತನ ಭಾಗ್ಯ ಎಲ್ಲರಿಗೂ ಸಿಗುವಂತಹದಲ್ಲ. ಪಾಣಾರರು ಎರಡು ವರ್ಷಕ್ಕೊಮ್ಮೆ ನಡೆಯುವ ಪಿಲಿಕೋಲದಲ್ಲಿ ಹುಲಿ ನರ್ತನ ಮಾಡುವುದರಲ್ಲಿ ನಿಸ್ಸೀಮರು. ಇದನ್ನು ಮನಗಂಡು ಸರ್ಕಾರ ಅರ್ಹತೆಯನ್ನು ಪರಿಗಣಿಸಿ ಪ್ರಶಸ್ತಿಯನ್ನು ನೀಡಿದೆ ಎಂದು ಶ್ರೀಶ ನಾಯಕ್ ಅಭಿಪ್ರಾಯ ಪಟ್ಟರು. ಸಂದರ್ಭ ಕಾಪು ಪುರ ಸಭಾ ಸದಸ್ಯ ಅನಿಲ್ ಕುಮಾರ್‌, ಅನಿಲ್ ಶೆಟ್ಟಿ ಮಾಂಬೆಟ್ಟು,ನವೀನ್ ಎಸ್.ಕೆ.,ದಾವೂದ್ ಅಬುಬಕ್ಕರ್,ಪ್ರವೀಣ್ ಕುಮಾರ್‌ ಇದ್ದರು. 

Leave a Reply

Your email address will not be published. Required fields are marked *