ಮಹಮ್ಮದಿಯ ಮಲ್ಲಾರ್, ಕದೀಮ್ ಜಾಮಿಯ ಮಸ್ಜಿದ್ ಮಲ್ಲಾರ್ ಹಾಗೂ ಜಿಲ್ಲಾ ಸರಕಾರಿ ಆಸ್ಪತ್ರೆ ಅಜ್ಜರಕಾಡು ಜಂಟಿ ಯಾಗಿ ಬೃಹತ್ ರಕ್ತದಾನ ಶಿಬಿರ
ಮಹಮ್ಮದಿಯ ಮಲ್ಲಾರ್, ಕದೀಮ್ ಜಾಮಿಯ ಮಸ್ಜಿದ್ ಮಲ್ಲಾರ್ ಹಾಗೂ ಬ್ಲಡ್ ಡೋನರ್ಸ್ ಫಾರಂ ಮಲ್ಲಾರ್ ಇದರ ನೇತೃತ್ವದಲ್ಲಿ ಜಿಲ್ಲಾ ಸರಕಾರಿ ಆಸ್ಪತ್ರೆ ಅಜ್ಜರಕಾಡು ಉಡುಪಿ ಇದರ ಸಹಯೋಗದೊಂದಿಗೆ ಪ್ರಥಮ ಬಾರಿಗೆ ಬೃಹತ್ ರಕ್ತದಾನ ಶಿಬಿರವನ್ನು ಕಾಪು ಮಲ್ಲಾರಿನಲ್ಲಿ ಹಮ್ಮಿಕೊಳ್ಳಲಾಯಿತು. ಈ ಶಿಬಿರದಲ್ಲಿ ಸುಮಾರು 70 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು. ಶಿಬಿರದ ಸಬಾ ಕಾರ್ಯಕ್ರಮ ದಲ್ಲಿ ಮಹಮ್ಮದಿಯ ಮಲ್ಲಾರ್ ಇದರ ಅಧ್ಯಕ್ಷರಾದ ಮಹಮ್ಮದ್ ಅರ್ಷದ್ ಹಾಗೂ ಕದೀಮ್ ಜಾಮಿಯಾ ಮಸ್ಜಿದ್ ಮಲ್ಲಾರ್ ಇದರ ಅಧ್ಯಕ್ಷರಾದ ಸಾಬು ಸಾಹೇಬ್ ಅತಿಥಿಗಳಾಗಿ ಬಾಗವಹಿಸಿದರು. ಜಿಲ್ಲಾ ಸರಕಾರಿ ಆಸ್ಪತ್ರೆ ಅಜ್ಜರಕಾಡ್ ಬ್ಲಡ್ ಬ್ಯಾಂಕ್ ಉಸ್ತುವಾರಿ ಯಾಗಿರುವ ಡಾಕ್ಟರ್ ಮೀನಾಕುಮಾರಿ ರಕ್ತದಾನದ ಮಹತ್ವದ ಬಗ್ಗೆ ತಿಳಿಸಿದರು.
ಮಹಮ್ಮದಿಯ ಮಲ್ಲಾರ್ ಇದರ ಸರ್ವ ಸದಸ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು..

