ಕಾರ್ಕಳ- ಪಡುಬಿದ್ರಿ ರಸ್ತೆಯ ಕಂಚನಡ್ಕದಲ್ಲಿ ಟೋಲ್ ಸಂಗ್ರಹ ಕೇಂದ್ರವನ್ನು ರದ್ದುಪಡಿಸುವ ನಿಟ್ಟಿನಲ್ಲಿ ಮಾಜಿ ಸಚಿವರು,ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷರಾದ ಶ್ರೀ ವಿನಯ್ ಕುಮಾರ್ ಸೊರಕೆಯವರ ನೇತೃತ್ವದಲ್ಲಿ ದಿನಾಂಕ 22.08.2024 ರಂದು ಲೋಕೋಪಯೊಗಿ ಸಚಿವರಾದ ಮಾನ್ಯ ಶತೀಶ್ ಜಾರಕಿಹೊಳಿ ಯವರಿಗೆ ಕಾಪು ಕಾಂಗ್ರಸ್ ಪಕ್ಷದ ನಾಯಕರ ನಿಯೋಗದೊಂದಿಗೆ ಭೇಟಿಯಾಗಿ ಮನವಿ ಸಲ್ಲಿಸಲಾಯಿತು .ಈ ಸಂಧರ್ಭದಲ್ಲಿ ಮಾನ್ಯ ಸಚಿವರು ಟೋಲ್ ಕೇಂದ್ರ ರದ್ದು ಮಾಡುವುದೆಂದು ಭರವಸೆ ನೀಡಿದರಿಂದ ಟೋಲ್ ಗೇಟ್ ನಿರ್ಮಾಣಕ್ಕೆ ಹಿನ್ನಡೆ ಉಂಟಾಗಿದೆ ಎಂದು ಬಲ್ಲಾ ಮೂಲಗಳಿಂದ ತಿಳಿದು ಬಂದಿದೆ

