
ಕಾರ್ಕಳ ತಾಲೂಕಿನ ಬೈಲೂರಿನಲ್ಲಿ ಉಮಿಕಲ್ ಬೆಟ್ಟದ ಮೇಲೆ 33 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಿ ಮಾತನಾಡಿದ ಅವರು ಮನುಷ್ಯ ಇತಿಹಾಸದ ಪ್ರಮುಖ ಭಾಗವಾಗಬೇಕು ಎಲ್ಲಾ ಹೊಸ ಇತಿಹಾಸವನ್ನು ಸೃಷ್ಟಿ ಮಾಡಿದ್ದಾನೆ ಎಂದು ಹೇಳಲು ಇಚ್ಛೆ ಪಡುತ್ತೇನೆ. ಇವತ್ತು ಇಷ್ಟು ದೊಡ್ಡ ಪರಶುರಾಮನ ಒಂದು ಮೂರ್ತಿಯನ್ನು ನೋಡಿ ನನಗೆ ನಿಜವಾಗಲೂ, ಕೂಡ ಬಹಳ ಸಂತೋಷವಾಯಿತು,ಮುಂದಿನ ದಿನಗಳಲ್ಲಿ ಕರಾವಳಿ ಭಾಗದ ಟೂರಿಸಂ ಇಂಬು ಕೊಡುವಂತಹ ಕೆಲಸವಾಗಲಿದೆ. ಇದರಿಂದಾಗಿ ಇಲ್ಲಿಯ ಆರ್ಥಿಕತೆ ಹೆಚ್ಚಿಸಿಕೊಳ್ಳುವುದಕ್ಕೆ ನಾವೆಲ್ಲ ಅವಕಾಶ ಮಾಡಿಕೊಡುತ್ತೇವೆ. ಈ ಭಾಗದಲ್ಲಿ ಟೂರಿಸಂ ಜೊತೆ ಇಂಡಸಿಯಲ್ ಬಹಳ ಅವಕಾಶವಿದೆ, ಕರಾವಳಿಯ ಪ್ರವಾಸೋದ್ಯಮ, ಸಾಂಸ್ಕೃತಿಕ ಪ್ರವಾಸೋದ್ಯಮಕ್ಕೆ ಮಾಸ್ಟರ್ ಪ್ಲಾನ್ ಮಾಡುವ ಮೂಲಕ ಆರ್ಥಿಕವಾಗಿ ಬಲಪಡಿಸಲು ಸರಕಾರ ಶಕ್ತವಾಗಿದೆ ಎಂದರು

