
ಲಾಕ್ ಡೌನ್ ಸಂಧರ್ಭದಲ್ಲಿ ಕಾರ್ಕಳದಲ್ಲಿ ಮಾತ್ರವೇ ಗೇರುಕಾರ್ಖಾನೆ ಚಟುವಟಿಕೆಗೆ ಸರಕಾರ ಅವಕಾಶ ನೀಡಿದ್ದಕ್ಕೆ ಪತ್ರಿಕೆಯಲ್ಲಿ ಬಂದ ವರದಿಯಂತೆ ಸಾಮಾನ್ಯ ಜನರಿಗಿಲ್ಲದ ಅವಕಾಶ ಯಾಕೆಂದು ಪ್ರಶ್ನೆ ಮಾಡಿದ್ದಕ್ಕೆ ಹಾಗೂ ಭ್ರಷ್ಟಾಚಾರ ದ ವಿರುದ್ದ ಕಾರ್ಕಳದಲ್ಲಿ ನಿರಂತರ ಹೋರಾಟ ನೀಡುತ್ತಿರುವ ನನ್ನ ವಿರುದ್ದ ಸುಳ್ಳು ದೂರು ದಾಖಲಿಸಿ ಕ ಮೂಲಕ ನನ್ನಂತ ಒಂದು ಸಣ್ಣ ಸಮುದಾಯದಿಂದ ಬಂದಿರುವವನ ಮೇಲೆ ಕಿರುಕುಳ ನೀಡುವ ಕೆಲಸ ನಡೆಯುತ್ತಿದೆ. ನಾನು ಭ್ರಷ್ಟಾಚಾರದ ವಿರುದ್ದ ನಿರಂತರವಾಗಿ ಹೋರಾಟ ಮಾಡಿಕೊಂಡು ಬಂದಿದ್ದು ಯಾರ ವಿರುದ್ದವೂ ಮಾನಹಾನಿ ಮಾಡುವಂತಹ ಕೃತ್ಯಗಳನ್ನು ಎಸಗಿಲ್ಲ.. ಭ್ರಷ್ಟಾಚಾರದ ವಿರುದ್ದದ ಹೋರಾಟವನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ತೀವ್ರಗೊಳಿಸುತ್ತೇನೆ. ನನ್ನ ವಿರುದ್ದ ಬಂದಿರುವ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗುವುದು. ಯೋಗೀಶ್ ಆಚಾರ್ಯ ಇನ್ನಾ. ಅಧ್ಯಕ್ಷರು ಯುವ ಕಾಂಗ್ರೇಸ್ ಕಾರ್ಕಳ

