ಪ್ರತಿ ವರ್ಷ ದಂತೆ ಈ ಭಾರಿಯು ಕೂಡಾ ಬೆಳ್ಳೆ ನವೋದಯ ಒಕ್ಕೂಟ ದಿಂದ ಹೊಸ ವರ್ಷಚಾರಣೆ ಯನ್ನು ಬಹಳ ವಿಜೃಂಭಣೆ ಯಿಂದ ಆಚರಿಸಲಾಯಿತು. ಕಾರ್ಯಕ್ರಮ ವನ್ನು ಪಡು ಬೆಳ್ಳೆ ಶ್ರೀ ನಾರಾಯಣ ಗುರು ಕನ್ನಡ ಮಾಧ್ಯಮ ಪ್ರೌಢ ಶಾಲೆಯ ಮುಖ್ಯ್ಯೊ ಪದ್ಯಯಿನಿ ಶ್ರೀಮತಿ ಉಷಾ ರವರು ಜ್ಯೋತಿ ಬೆಳಗಿಸಿ ಕೇಕ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ಮುಂದಕ್ಕೆ ಅವರು ಮಾತನಾಡುತ್ತ ಹಿಂದಿನ ದಿನಗಳಲ್ಲಿ ಹೊಸವರ್ಷ ಯಾವರೀತಿ ಯಲ್ಲಿ ಆಚರಿಸುತ್ತಿದ್ದರು ಮತ್ತು ಹಿಂದೆ ಯುಗಾದಿ ಯಂದೇ ಹೊಸ ವರ್ಷ ವನ್ನು ಆಚರಿಸುತ್ತಿದ್ದರು. ಬೇವು ಬೆಲ್ಲ ವನ್ನು ಎಲ್ಲರಿಗೂ ಹಂಚಿ ಸಂಭ್ರಮ ಪಡುತ್ತಿದ್ದೀದ್ದರು.ಎಂದು ಹೊಸ ವರ್ಷ ಆಚರಣೆಯ ಮಹತ್ವ ತಿಳಿಸಿ ದರು. ಬೆಳ್ಳೆ ಸಿ ಎ ಬ್ಯಾಂಕ್ ನ ಅಧ್ಯಕ್ಷ ಬೆಳ್ಳೆ ಶಿವಾಜಿ ಎಸ್ ಸುವರ್ಣ ರು ಸರ್ವರಿಗೂ ಹೊಸ ವರ್ಷ ದ ಶುಭಾಶಯಗಳನ್ನು ಹೇಳಿದರು. ಶ್ರೀಮತಿ ಉಷಾರವಾರನ್ನು ಬೆಳ್ಳೆ ನವೋದಯ ಒಕ್ಕೂಟ ದಿಂದ ಆತ್ಮೀಯ ವಾಗಿ ಮಲ್ಲಿಗೆ ಹೂ ಮುಡಿಸಿ ಪೇಟ ತೊಡಿಸಿ ಫಲ ಪುಷ್ಪ ಸ್ಮರಣಿ ಕೆ ಇತ್ತು ಸನ್ಮಾನಿಸಲಾಯಿತು. ಸಮಾರಂಭ ದ ಅಧ್ಯಕ್ಷತೆ ಯನ್ನು ಒಕ್ಕೂಟ ದ ಅಧ್ಯಕ್ಷ ಹರೀಶ್ ಚಂದ್ರ ಆಚಾರ್ಯ ರವರು ವಹಿಸಿ ದ್ದರು .ನವೋದಯ ಸ್ವ ಸಹಾಯ ಸಂಘ ಗಳ ತಾಲೂಕು ಮೇಲ್ವಿಚಾರಕ ಕೃಷ್ಣ ಅಮೀನ್ ರಂಜನಿ ಹೆಗ್ಡೆ ಅಂಬಿಕಾ ಸುವರ್ಣ ಮತ್ತು ಒಕ್ಕೂಟ ದ ಪದಾಧಿಕಾರಿಗಳು ವೇದಿಕೆ ಯಲ್ಲಿದ್ದರು . ಶ್ರೀಮತಿ ಸುಜಾತಾ ಎಸ್ ಸುವರ್ಣ ರವರು ಸೊಗಸಾಗಿ ಕಾರ್ಯ ಕ್ರಮ ನಿರೂಪಣೆ ಮಾಡಿದರು. ಪ್ರೇರಕಿ ಗೀತಾ ಶೆಟ್ಟಿ ಸರ್ವರನ್ನು ವಂದಿಸಿದರು. ಈ ದಿನದ ಕಾರ್ಯ ಕ್ರಮದ ಸಂಪೂರ್ಣ ಜವಾಬ್ದಾರಿ ಯನ್ನು ಐಶ್ವರ್ಯ ನವೋದಯ ಸ್ವ ಸಹಾಯ ಸಂಘ ದ ಸರ್ವ ಸದಸ್ಯರು ಅಚ್ಚು ಕಟ್ಟಾಗಿ ನಿರ್ವಹಿಸಿ ದರು .
ನವೋದಯ ಒಕ್ಕೂಟ ದ ಸದಸ್ಯರಿಗೆ ವಿವಿಧ ಆಟೋಟ ಸ್ಪರ್ಧೆ ಗಳನ್ನು ಏರ್ಪಡಿಸಿದ್ದು ವಿಜೇತ ರಿಗೆ ಬಹುಮಾನ ವಿತರಿಸಲಾಯಿತು


