ಭಾರತದ ಪ್ರಸಿದ್ದ ಖಾಸಗಿ ಹಣಕಾಸು ಸಂಸ್ಥೆಯಾದ ಶ್ರೀರಾಮ್ ಫೈನಾನ್ಸ್ ಲಿಮಿಟೆಡ್ ನೂತನ ಶಿರ್ವ ಶಾಖೆಯ ಉದ್ಘಾಟನೆ ಜು.22ರ ಮಂಗಳವಾರ ಬೆಳಿಗ್ಗೆ 10.30ಕ್ಕೆ ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ್ ಎದುರು ಇರುವ ವಿನೋದ್ ಟವರ್ ಮೊದಲನೇ ಮಹಡಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀರಾಮ್ ಫೈನಾನ್ಸ್ ಲಿ.ಇದರ ಝೂನಲ್ ಬಿಸಿನೆಸ್ ಹೆಡ್ ಶರಶ್ಚಂದ್ರ ಭಟ್, ಕಾಕುಂಜೆ ನೆರವೆರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಟೆಂಪೋ ಚಾಲಕರು ಮತ್ತು ಮಾಲಕರು ಸಂಘದ ಅಧ್ಯಕ್ಷ ಗಿರಿಧರ್ ಪ್ರಭು, ವಿನೋದ್ ಟವರ್ ಮಾಲಕ ವಸಂತ್ ಕಾಮತ್, ಜನ್ನ ಚೇತನ ಎಜುಕೇಶನ್ ಟ್ರಸ್ಟ್ ಕಾರ್ಯದರ್ಶಿ ಜಯಪ್ರಕಾಶ ಶೆಟ್ಟಿ, ನ್ಯಾಯವಾದಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ವಿಲ್ಸನ್ ರೊಡ್ರಿಗಸ್, ಶಿರ್ವ ಪೊಲೀಸ್ ಉಪನಿರಿಕ್ಷಕರು ಮಂಜುನಾಥ್ ಮರಬದ, ಹಸನಬ್ಬ ಶೇಖ್,ನಾಗರಾಜ್ ಬಿ, ಶ್ರೀರಾಮ್ ಫೈನಾನ್ಸ್ ಲಿಮಿಟೆಡ್, ಸದಾಶಿವ ಅಮೀನ್, ಶ್ರೀರಾಮ್ ಫೈನಾನ್ಸ್ ಲಿಮಿಟೆಡ್, ಸುರೇಶ್ ಶೆಟ್ಟಿ, ಶ್ರೀರಾಮ್ ಫೈನಾನ್ಸ್ ಲಿಮಿಟೆಡ್, ಗಣಪತಿ ನಾಯ್ಕ, ಶ್ರೀ ರಾಮ್ ಫೈನಾನ್ಸ್ ಲಿಮಿಟೆಡ್ ಭಾಗವಹಿಸಲಿದ್ದಾರೆ ಎಂದು ಶಿರ್ವ ಶಾಖಾ ಪ್ರಬಂಧಕರಾದ ಜನಕ್ ಬಿ. ಪ್ರಕಟನೆಯಲ್ಲಿ ತಿಳಿಸಿದ್ದಾರೆ.

