
ಕಾಪು ತಾಲೂಕಿನ ಹೆಜಮಾಡಿಯ ಅಲ್-ಅಝರ್ ಆಂಗ್ಲಮಾಧ್ಯಮ ಶಾಲೆಯಲ್ಲಿ ಇಂದು ಬೆಳ್ಳಿ ಹಬ್ಬದ ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಯಿತು.ನಾಲ್ಕು ದಿನಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ಅಂಧ ಕಲಾವಿದರಿಂದ ಸಂಗೀತ ರಸಮಂಜರಿ, ರಕ್ಷಕರಿಂದ ಆಹಾರೋತ್ಸವ, ಹಳೆ ವಿದ್ಯಾರ್ಥಿಗಳಿಂದ ‘ನಾ ಕಲಿತ ಶಾಲೆಯಲ್ಲಿ ಒಂದು ದಿನ, ಶಿಕ್ಷಕಿಯರಿಂದ ಮನೋರಂಜನಾ ಕಾರ್ಯಕ್ರಮ, ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಮಂಗಳೂರು ಡಾನ್ಸ್ ಅಕಾಡೆಮಿಯಿಂದ ನೃತ್ಯ ವೈಭವ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮ ನೆರವೇರಿತು.ಕಾರ್ಯಕ್ರಮದಲ್ಲಿ ಕಾಪು ಶಾಸಕ ಲಾಲಾಜಿ ಮೆಂಡನ್, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಎಚ್.ಬಿ ಮೊಹಮ್ಮದ್, ಮಂಗಳೂರು ಡಾನ್ಸ್ ಅಕಾಡೆಮಿಯಿಂದ ನೃತ್ಯ ವೈಭವ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮ ನೆರವೇರಿತು.ಕಾರ್ಯಕ್ರಮದಲ್ಲಿ ಕಾಪು ಶಾಸಕ ಲಾಲಾಜಿ ಮೆಂಡನ್, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಎಚ್.ಬಿ ಮೊಹಮ್ಮದ್, ಮಂಗಳೂರು ವಿವಿ ಅಸೋಸಿಯೇಟ್ ಪ್ರೊಫೆಸರ್ ಡಾ|| ಅಬುಬಕ್ಕರ್ ಸಿದ್ಧಿಕ್, ಡಿ.ಡಿ.ಪಿ.ಐ ಗಣಪತಿ, ಬಿಇಒ ಚಂದ್ರಗೌಡ ಡಿ. ಎಚ್, ಹೆಜಮಾಡಿ ಗ್ರಾ.ಪಂ. ಅಧ್ಯಕ್ಷ ಪಾಂಡುರಂಗ, ಡಾ|| ಮೊಹಮ್ಮದ್ ಇಸ್ಮಾಯಿಲ್, ಇಬ್ರಾಹಿಂ ಶರೀಫ್, ,ಶಾಲೆಯ ಸಂಚಾಲಕರಾದ ಕೆ.ಎಸ್.ಶೇಖಬ್ಬ, ಅಜೀಜ್ ಹೆಜಮಾಡಿ ರಮೀಜ್ ಹುಸೈನ್, ಕನ್ನಂಗಾರ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಎಚ್.ಬಿ ಮೊಹಮ್ಮದ್, ಕಾರ್ಯದರ್ಶಿ ಎಮ್.ಐ ಮೊಹಮ್ಮದ್, ಕೋ ಆರ್ಡಿನೇಟರ್ ಹಂಝ ಅಹಮದ್, ಪ್ರಾಂಶುಪಾಲೆ ಶಾಹಿನ್, ಅಬ್ದುಲ್ ಖಾದರ್, ಅಬ್ದುಲ್ ರಝಾಕ್ ಮುಂತಾದವರು ಉಪಸ್ಥಿತರಿದ್ದರು

