×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಸವಿತಾ ಸಮಾಜ ವಿ. ಸೌಹಾರ್ದ ಸಹಕಾರಿ ಸಂಘ ಟಿಶ್ಯೂ ಪೇಪರ್ ತಯಾರಿಕ ಘಟಕ ಉದ್ಘಾಟಿಸಿದ ಯಶಪಾಲ್ ಸುವರ್ಣ

ಬ್ರಹ್ಮಾವರ: ಟಿಶ್ಯೂ ಪೇಪರ್ ತಯಾರಿಕ ಘಟಕವನ್ನು ಯಶಪಾಲ್ ಸುವರ್ಣ ಉದ್ಘಾಟಿಸಿದರು. ಮಂಗಳವಾರ ಉದ್ಘಾಟಿಸಿ ಮಾತ ನಾಡಿದ ಅವರು, ಸಮಾಜ ಬಾಂಧ ವರ ಆರ್ಥಿಕ ಪ್ರಗತಿಯೊಂದಿಗೆ ಸಾಮಾಜಿಕ ಕಳಕಳಿ, ಜನಪರ ಯೋಜನೆ ಗಳನ್ನು ಹಮ್ಮಿಕೊಳ್ಳುವಲ್ಲಿ ಉಡುಪಿ ಸವಿತಾ ಸಮಾಜ ವಿ. ಸೌಹಾರ್ದ ಸಹಕಾರಿ ಸಂಘವು ಸರ್ವರಿಗೂ ಮಾದರಿ ಸೌಂದರ್ಯ ವೃದ್ಧಿ ಜತೆಗೆ ಸವಿತಾ ಸಮಾಜದ ಏಳಿಗೆಗೆ ಪ್ರಯತ್ನಿಸುವೆ. ಕ್ಷೌರಿಕ ವೃತ್ತಿಯ ಭವಿಷ್ಯದ ದೃಷ್ಟಿಯಿಂದ ತರಬೇತಿ ಕೋರ್ಸ್ ಪ್ರಾರಂಭಿಸುವಂತೆ ಕರೆ ನೀಡಿದರು. ಸಂಘದ ಅಧ್ಯಕ್ಷ ನವೀನ್‌ ಚಂದ್ರ ಭಂಡಾರಿ ಮಣಿಪಾಲ ಅಧ್ಯಕ್ಷತೆ ವಹಿಸಿ, ಸವಿತಾ ಸಹಕಾರಿಯು ವೃತ್ತಿ ನಿರತರಿಗೆ ವಿವಿಧ ಸಹಕಾರ, ವಿದ್ಯಾರ್ಥಿ ವೇತನ, ನಿವೃತ್ತಿ ಸೌಲಭ್ಯ ಸೇರಿದಂತೆ ಬಹುಮುಖಿ ಯಾಗಿ ನೆರವಾಗುತ್ತಿದೆ. ಹೊಸ ಉದ್ಯಮ ಗಳನ್ನೂ ಪ್ರಾರಂಭಿಸಿದೆ ಎಂದರು. ರಾಜಕೀಯ ಬಲ ಸಮುದಾಯಕ್ಕೆ ಇನ್ನಷ್ಟು ರಾಜ ಕೀಯ ಬಲ ನೀಡುವ ಜತೆಗೆ ಕ್ಷೌರಿಕ ವೃತ್ತಿ ನಿರತರಿಗೆ ಪ್ಯಾಕೇಜ್‌, ವಿದ್ಯಾರ್ಥಿಗಳಿಗೆ ಪ್ರೋತ್ಸಾಹ, ಸಾಧಕರಿಗೆ ಪ್ರಶಸ್ತಿ ಸೇರಿದಂತೆ ಸರಕಾರ ಯೋಜನೆ ಹಮ್ಮಿ ಕೊಳ್ಳುವಂತೆ ಸವಿತಾ ಸಮಾಜದ ಗೌರವಾಧ್ಯಕ್ಷ ಗೋವಿಂದ ಭಂಡಾರಿ ಬನ್ನಂಜೆ ಆಗ್ರಹಿಸಿದರು. ಅಂತಾರಾಷ್ಟ್ರೀಯ ವಿನ್ಯಾಸಗಾರ ಶಿವರಾಂ ಮುಂಬಯಿ ಟಿಶ್ಯೂ ಪೇಪರ್ ಉತ್ಪನ್ನ ಬಿಡುಗಡೆಗೊಳಿಸಿದರು. ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿರ್ದೇಶಕ ಮಂಜುನಾಥ್ ಎಸ್. ಕೇಶ ಭಂಡಾರಿ ಕೆ., ರಾಜ್ಯ ಮದ್ಯ ಮಾರಾಟಗಾರರ ಒಕ್ಕೂಟದ ಪ್ರ, ಕಾವ್ಯದರ್ಶಿ ಬಿ. ಗೋವಿಂದರಾಜ್ ಹೆಗ್ಡೆ ಹೊಸಪೇಟೆ ನಗರಸಭಾ ಅಧ್ಯಕ್ಷ ರೂಪೇಶ್ ಕುಮಾರ್ ಎನ್., ದ.ಕ. ಸವಿತಾ ಸಮಾಜ ಸಹಕಾರಿ ಅಧ್ಯಕ್ಷ ವಿಶ್ವನಾಥ ಸಾಲಿಯಾನ್, ಸೌಹಾರ್ದ ಅಭಿವೃದ್ಧಿ ಅಧಿಕಾರಿ ವಿಜಯ್ ಬಿ.ಎಸ್., ಜಿಲ್ಲಾ ಮಹಿಳಾ ಸೌಂದರ್ಯ ತಜ್ಞೆಯರ ಸಂಘದ ಅಧ್ಯಕ್ಷೆ ಕಿಶ್ವರ್ ಜಹಾನ್, ಉಪ್ಪರು ಪಂ. ಅಧ್ಯಕ್ಷೆ ಗಾಯತ್ರಿ, ಜಿಲ್ಲಾ ಸವಿತಾ ಸಮಾಜ ಅಧ್ಯಕ್ಷ ವಿಶ್ವನಾಥ ಭಂಡಾರಿ ನಿಂಜೂರು, ಸಹಕಾರಿಯ ಸಿಇಒ ಮಾಲತಿ ಅಶೋಕ್ ಭಂಡಾರಿ ಶಿವಾನಂದ ಸಾಲಿಯಾನ್ ಉಪಸ್ಥಿತರಿದ್ದರು. ನಿರ್ದೇಶಕರಾದ ಸದಾಶಿವ ಬಂಗೇರ ಕುರ್ಕಾಲು ಸ್ವಾಗತಿಸಿ, ಶಿವರಾಮ ಭಂಡಾರಿ ಹಂದಾಡಿ ವಂದಿಸಿದರು. ಪಡುಕೆರೆ ಮಂಜುನಾಥ ಭಂಡಾರಿ ನಿರೂಪಿಸಿದರು.

Leave a Reply

Your email address will not be published. Required fields are marked *