ಬೆಳ್ಮಣ್ : ಕುಂಭ ನಿಧಿ ಕ್ರೆಡಿಟ್ ಕೋ ಅಪರೆಟಿವ್ ಸೂಸೈಟಿ ಬೆಳ್ಮಣ್ ಇದರ ನೂತನ ಆಡಳಿತ ಮಂಡಳಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕುಶ ಆರ್ ಮೂಲ್ಯ ಇನ್ನಾ ಉಪಾಧ್ಯಕ್ಷರಾಗಿ ಜಗನ್ನಾಥ್ ಮೂಲ್ಯ ಬೆಳ್ಮಣ್ ಅವಿರೋಧವಾಗಿ ಆಯ್ಕೆಆಗಿದ್ದಾರೆ. ನಿರ್ದೇಶಕರಾಗಿ ಜಯರಾಮ್ ಕುಲಾಲ್ ಅಗರಟ್ಟ, ಗೋಪಾಲ್ ಮೂಲ್ಯ ಮಡಿಕೆ, ಉಮೇಶ್ ಬೆಳ್ಳಿ ಬೆಟ್ಟು, ಗಣೇಶ್ ಕುಲಾಲ್ ಬೋಳ, ರಮಾನಂದ ಮೂಲ್ಯ ಬೆಳ್ಮಣ್, ಶ್ರೀಮತಿ ಸುಗಂಧಿ ಮೂಲ್ಯ ಬೋಳ, ಸುರೇಶ್ ಮೂಲ್ಯ ಕೆದಿಂಜೆ, ಬೊಗ್ಗು ಮೂಲ್ಯ ಬೆಲಾಡಿ ಶ್ರೀಮತಿ ಪ್ರತಿಮಾ ಶ್ರೀಧರ್, ರಾಜೇಶ್ ಕುಲಾಲ್ ಸಾಂತೂರು, ದೀಪಕ್ ಬೆಳ್ಮಣ್ ಅಶೋಕ್ ಕುಲಾಲ್ ಮುಂಡ್ಕೂರು, ಶಂಕರ್ ಮೂಲ್ಯ ಇನ್ನಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ಸಹಕಾರಿ ಇಲಾಖೆಯ ಶ್ರೀಮತಿ ಜಯಂತಿಯವರು ಚುನಾವಣೆ ಪ್ರಕ್ರಿಯೆ ನಡೆಸಿದರು.


