
ಪಡುಬಿದ್ರಿಯ ದೀನ್ಸ್ಟೀಟ್ನಲ್ಲಿ ನೂತನವಾಗಿ ನಿರ್ಮಾಣಗೊಂಡ ನೂರಾನಿಯಾ ಹನಫಿ ಜಾಮಿಯಾ ಮಸ್ಟಿದ್ ಇದರ ಉದ್ಘಾಟನಾ ಸಮಾರಂಭ ಮಾರ್ಚ್ 16ರಂದು ನಡೆಯಲಿದೆ. ಅಂದು ಸಂಜೆ 5. 30ಕ್ಕೆ ಮೌಲಾನಾ ಹಝತ್ ಮುಹಮ್ಮದ್ ಫಾಝಿಲ್ ರ ಕಾವಳಕಟ್ಟೆ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚಿಸಲಿದ್ದಾರೆ.ಪಡುಬಿದ್ರಿ ಜುಮ್ಮಾಮಸೀದಿ ಖತೀಬ್ ಎಸ್.ಎಂ.ಅಬ್ದುಲ್ ರಹಿಮಾನ್ ಮದನಿ ಪ್ರಧಾನ ಭಾಷಣ ಮಾಡಲಿದ್ದಾರೆ.ನೂರಾನಿಯಾ ಹನಫಿ ಜುಮ್ಮಾಮಸ್ಟಿದ್ ಖತೀಬ್ ಮೆಹಬೂಬ್ ಶರೀಫ್ ಅಧ್ಯಕ್ಷತೆ ವಹಿಸಲಿದ್ದಾರೆ.ನೂರಾನಿಯಾ ಮಸೀದಿಯ ಪೇಶ್ ಇಮಾಮ್ ಅಬ್ದುಲ್ ಖುದ್ದೂಸ್ ದುವಾ ನೆರವೇರಿಸಲಿದ್ದಾರೆ.ಅನಿವಾಸಿ ಉದ್ಯಮಿ ಇಬ್ರಾಹಿಂ ಮುಹಮ್ಮದ್ ಇಬ್ರಾಹಿಂ, ಪಡುಬಿದ್ರಿ ಜುಮ್ಮಾ ಮಸೀದಿ ಅಧ್ಯಕ್ಷ ಹಾಜಿ ಪಿ.ಕೆ.ಮೊಯಿದಿನ್, ಕಂಚಿನಡ್ಕ ಜುಮ್ಮಾಮಸೀದಿ ಖತೀಬ್ ಅಬ್ದುಲ್ ಲತೀಫ್ ಮದನಿ, ಮುಹಮ್ಮದ್ ಶರೀಫ್ ಮೂಡಬಿದ್ರಿ, ಹಿಮಾಯತುಲ್ ಇಸ್ಲಾಂ ಸಂಘದ ಅಧ್ಯಕ್ಷ ಶಬ್ಬಿರ್ ಹುಸೇನ್, ಜಮೀಯತುಲ್ ಫಲಾಹ್ ಅಧ್ಯಕ್ಷ ಶಭಿ ಅಹಮದ್ ಕಾಝಿ ಮತ್ತಿತರರು ಭಾಗವಹಿಸಲಿದ್ದಾರೆ. 17ರಂದು ಬೆಳಗ್ಗೆ 9ರಿಂದ ಸೌಹಾರ್ದ ಸಂಗಮ ನಡೆಯಲಿದ್ದು, ಪಡುಬಿದ್ರಿ ಜುಮ್ಮಾಮಸೀದಿ ಅಧ್ಯಕ್ಷ ಹಾಜಿ ಪಿ.ಕೆ.ಮೊಹಿದ್ದೀನ್ ಲಚ್ಚಿಲ್ ಉದ್ಘಾಟಿಸಲಿದ್ದಾರೆ. ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ಮಾಜಿ ಶಾಸಕ ವಿನಯಕುಮಾರ್ ಸೊರಕೆ ಸಹಿತ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಬಳಿಕ ಮಸೀದಿಯ ಜುಮಾ ನಮಾಝಿನ ನೇತೃತ್ವ ಹಾಗೂ ವಕ್ಸ್ ವಿಧಿ ನಿರ್ವಹಣೆಯನ್ನು ಮೌಲಾನಾ ಹಝತ್ ಮುಹಮ್ಮದ್ ಫಾಝಿಲ್ ರಝಿ ಕಾವಳಕಟ್ಟೆ ನೆರವೇರಿಸಲಿದ್ದಾರೆ ಎಂದು ತಿಳಿಸಿದ್ದಾರೆ.

