
ಕುಂದಾಪುರ: ತಾಲೂಕಿನ ಹಕ್ಲಾಡಿ ಗ್ರಾಮದಲ್ಲಿ ಅಕ್ರಮ ಮರಳು ಅಡ್ಡೆಗೆ ಗಣಿ ಇಲಾಖೆ ಸಹಾಯಕ ಭೂ ವಿಜ್ಞಾನಿ ಸಂಧ್ಯಾ ಕುಮಾರಿ ಮತ್ತು ಗಂಗೊಳ್ಳಿ ಎಸ್ಐ ವಿನಯ್ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿ ಮರಳು ವಶಪಡಿಸಿಕೊಂಡಿದ್ದಾರೆ. ಗುತ್ತಿಗೆದಾರರಿಗೆ 7 ಸಾವಿರಕ್ಕೆ ಮಾರಾಟ ಮಾಡಲು ಸ್ಥಳೀಯ ಕೆಲ ಯುವಕರು ರಾತ್ರಿ ಮರಳು ತೆಗೆದು ರಸ್ತೆ ನಿರ್ಮಾಣವಾಗುತ್ತಿರುವ ಸ್ಥಳದ ಬಳಿ ಸ್ಟಾಕ್ ಮಾಡಿದ್ದರು. ಗಣಿ ಇಲಾಖೆ ಅಧಿಕಾರಿಗಳು ಮರಳು ವಿಕ್ರಯಿಸಿದ ಗುತ್ತಿಗೆದಾರರಿಗೆ 12 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ. 25 ಯುನಿಟ್ಗೂ ಅಧಿಕ ಉಪ್ಪುನೀರಿನ ಮರಳು ಸಂಗ್ರಹಿಸಿಟ್ಟಿದ್ದರು

