
ಮೆಸ್ಕಾಂ ಸಿಬ್ಬಂದಿಗೆ ಸಾಲ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ಮಹಿಳೆಯೊಬ್ಬರು ವಂಚಿಸಿರುವುದಾಗಿ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಬೊಮ್ಮರಬೆಟ್ಟು ಗ್ರಾಮದ ಗುರುಪ್ರಸಾದ್ ಅವರು ಮೆಸ್ಕಾಂ ಇಲಾಖೆಯಲ್ಲಿ ಶಿಫ್ಟ್ ಹೆಲ್ಪರ್ ಆಗಿ ತಾತ್ಕಾಲಿಕ ನೌಕರರಾಗಿ ಕೆಲಸ ಮಾಡಿಕೊಂಡಿದ್ದಾರೆ. ಇವರಿಗೆ ತಂಗಿಯ ಮದುವೆ ನಿಮಿತ್ತ ಹಣಕಾಸಿನ ಅವಶ್ಯಕತೆ ಇದ್ದು, ಪಿಪಿಸಿ ಬಳಿ ಕಛೇರಿಯನು ಹೊಂದಿರುವ ಆಪಾದಿತೆ ತಬಸಂ ಎಂಬಾಕೆಯು ಇವರಿಗೆ ಸಾಲ ಕೊಡಿಸುವುದಾಗಿ ನಂಬಿಸಿ ಅವರಿಂದ ಅ. 30 ರಂದು ರೂ.7,000 ಹಣವನ್ನು ಹಾಗೂ ದಾಖಲೆಗಳನ್ನು ಪಡೆದು ಕೊಂಡಿದ್ದಳು. ಆದರೆ ಸಾಲ ಮಾಡಿಸಿಕೊಡದೆ, ಪಡೆದ ಹಣವನ್ನೂ ಈವರೆಗೂ ವಾಪಾಸು ನೀಡದೇ ಮೋಸ ಮಾಡಿದ್ದಾಳೆ ಎಂಬುದಾಗಿ ಗುರುಪ್ರಸಾದ್ ಅವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

