
ಕುಂದಾಪುರ ತಾಲೂಕು ತೆಕ್ಕಟ್ಟೆ ಚಾಲಕನ ನಿಯಂತ್ರಣ ತಪ್ಪಿದ ಬೋಟೊಂದು ಕಡಲ ತೀರಕ್ಕೆ ಅಪ್ಪಳಿಸಿದ ಘಟನೆ ಕೊಮೆ ಕಡಲ ತೀರದಲ್ಲಿ ಸಂಭವಿಸಿದೆ. ನಿನ್ನೆ ತಡರಾತ್ರಿ ಈ ಅವಘಡ ನಡೆದಿದ್ದು, ಬೋಟ್ ನಲ್ಲಿ ಆರು ಮಂದಿ ಮೀನುಗಾರರಿದ್ದರು ಎನ್ನಲಾಗಿದೆ. ಅದೃಷ್ಟವಶಾತ್ ಮೀನುಗಾರರು ಯಾವುದೇ ಗಾಯಗಳಾಗದೆ ಪಾರಾಗಿದ್ದಾರೆ.ಗಂಗೊಳ್ಳಿ ಮೂಲದ ಮೀನುಗಾರಿಕಾ ಬೋಟ್ ಇದಾಗಿದ್ದು ಅವಘಡದಲ್ಲಿ ಬೋಟ್ ಗೂ ಯಾವುದೆ ಹಾನಿಸಂಭವಿಸಿಲ್ಲ

