×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಕ್ಷಮೆ ಕೇಳುವ ನೆಪದಲ್ಲಿ ರಿಕ್ಷಾ ಚಾಲಕನಿಂದ ಹಲ್ಲೆ- ಪ್ರಕರಣ ದಾಖಲು

ಕ್ಷಮೆ ಕೇಳುವ ನೆಪದಲ್ಲಿ ಕರೆದು ವ್ಯಕ್ತಿಯೊಬ್ಬರ ಮೇಲೆ ತಲವಾರ್ ನಿಂದ ಹಲ್ಲೆ ಮಾಡಿರುವ ಘಟನೆ ಕುಂದಾಪುರ ತಾಲೂಕಿನ ಸಿದ್ದಾಪುರ ಗ್ರಾಮದ ಚಕ್ರೇಬೇರು ಎಂಬಲ್ಲಿ ನಡೆದಿದೆ.ಈ ಬಗ್ಗೆ ಹಲ್ಲೆಗೊಳಗಾದ ಸಿದ್ದಾಪುರ ಗ್ರಾಮದ ಭಾಸ್ಕರ ಶೆಟ್ಟಿ ಎಂಬವರು ಪೊಲೀಸರಿಗೆ ದೂರು ನೀಡಿದ್ದು, ಇವರು ಜನತಾ ಕಾಲೋನಿಯ ರಿಕ್ಷಾ ಚಾಲಕ ಗಣೇಶ ಸಿದ್ಧಾಪುರ ಎಂಬಾತನ ಬಗ್ಗೆ ಈ ಹಿಂದೆ  ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ವಿಷಯದಲ್ಲಿನ.1 ರಂದು ಗಣೇಶನು,ಭಾಸ್ಕರ ಶೆಟ್ಟಿ ಅವರಿಗೆ ಕರೆ ಮಾಡಿ ನಾನು ಕೊರಗಜ್ಜನ ಸನ್ನಿಧಿಯಲ್ಲಿ ಈ ಹಿಂದೆ ನೀಡಿದ ದೂರಿನ ಬಗ್ಗೆ ಕ್ಷಮೆ ಕೋರುತ್ತೇನೆ, ಹೋಗಿ ಬರುವ ಬಾ ಎಂದು ಹೇಳಿರುತ್ತಾನೆ. ಅದರಂತೆ ಅದರಂತೆ ಭಾಸ್ಕರ ಶೆಟ್ಟಿ ಅವರು ಸಿದ್ದಾಪುರ ಪೇಟೆಗೆ ಹೋಗಿ ಅಲ್ಲಿಂದ ಗಣೇಶನೊಂದಿಗೆ ಕುಂದಾಪುರ ತಾಲೂಕಿನ ಸಿದ್ದಾಪುರ ಗ್ರಾಮದ ಚೌಬೇರು ಎಂಬಲ್ಲಿಗೆ ಹೋಗಿದ್ದರು.ಅಲ್ಲಿ ಗಣೇಶನು ದೇವಸ್ಥಾನದ ಒಳಗಡೆ ಹೋಗಿ ಕ್ಷಮೆ ಕೇಳಿದಂತೆ ಮಾಡಿ ಬಳಿಕ ದೇವಸ್ಥಾನದ ಹೊರಗಡೆ ಬಂದು ಇವತ್ತು ನಿನ್ನ ಕಡಿಯುವುದೇ ಎಂದು ಹೇಳಿ, ಆತನ ಆಟೋ ರಿಕ್ಷಾದ ಒಳಗಡೆ ಇದ್ದತಲವಾರು ತೆಗೆದು ಭಾಸ್ಕರ ಶೆಟ್ಟಿ ಇವರನ್ನು ಕೊಲೆ ಮಾಡುವ ಉದ್ದೇಶದಿಂದ ತಲವಾರು ತೆಗೆದು ಕುತ್ತಿಗೆಗೆ ಬೀಸಿದ್ದು,ಈ ಸಮಯ ತಪ್ಪಿಸಿಕೊಂಡಾಗ ತಲವಾರು ಅವರ ಬಲಭುಜಕ್ಕೆ ತಾಗಿ ತೀವ್ರ ಸ್ವರೂಪದ  ರಕ್ತಗಾಯವಾಗಿರುತ್ತದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ 

Leave a Reply

Your email address will not be published. Required fields are marked *