×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಉಡುಪಿ ಶ್ರೀ ಕೃಷ್ಣಮಠಕ್ಕೆ ಬಂದಿದ್ದ ಭಕ್ತೆಯ ಅಪಾರ ಮೌಲ್ಯದ ಸೊತ್ತು ಕಳವು!

ಉಡುಪಿ ನಗರದ ಶ್ರೀ ಕೃಷ್ಣಮಠಕ್ಕೆ ಬಂದಿದ್ದ ಬೆಂಗಳೂರು ಮೂಲದ ಭಕ್ತರೋರ್ವರ 1.24 , 500 ಲಕ್ಷ ರೂ. ಮೌಲ್ಯದ ಸೊತ್ತು ಕಳವಾಗಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಬೆಂಗಳೂರಿನ ರಾಜರಾಜೇಶ್ವರಿ ನಗರದ ನಿವಾಸಿ ಸುಧಾ ಪರಿಮಳ ಎಂಬುವವರು ಅ.22 ರಂದು ಬೆಳಿಗ್ಗೆ ತನ್ನ ಕುಟುಂಬದ ಸದಸ್ಯರೊಂದಿಗೆ ಉಡುಪಿ ಕಡೆಗೆ ದೇವರ ದರ್ಶನಕ್ಕೆಂದು ಬಂದಿದ್ದರು.ಅ.23 ರಂದು ಬೆಳಿಗ್ಗೆ ದೇವರ ದರ್ಶನ ಪಡೆಯಲು ಉಡುಪಿ ಕೃಷ್ಣ ಮಠಕ್ಕೆ ಹೋಗಿದ್ದರು. ಈ ವೇಳೆ ದೇವಸ್ಥಾನದಲ್ಲಿ ಅವರ ಹ್ಯಾಂಡ್ ಬ್ಯಾಗ್ ನಲ್ಲಿದ್ದ ಪರ್ಸ್‌ವೊಂದು ಕಳವಾಗಿದೆ.ಆ ಪರ್ಸ್ ನಲ್ಲಿ ಚಿನ್ನದ ಕರಿಮಣಿ ಸರ, ನಗದು 4,500 ರೂ., ಎಟಿಎಂ ಕಾರ್ಡ್ ಸಹಿತ ಅಗತ್ಯ ದಾಖಲೆಗಳು ಇದ್ದು, ಕಳವಾದ ಸೊತ್ತುಗಳ ಒಟ್ಟು ಮೌಲ್ಯ 1, 24, 500 ಆಗಿರಬಹುದು ಎಂಬುದಾಗಿ ಸುಧಾ ಪರಿಮಳ ಅವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Leave a Reply

Your email address will not be published. Required fields are marked *