
ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತ ರನ್ನು ವೋಟಿಂಗ್ ಬ್ಯಾಂಕ್ ಆಗಿ ಮಾತ್ರ ಇಟ್ಟು ಕೊಂಡು ವಿಶೇಷ ವಾಗಿ ಮುಸ್ಲಿಮರ ರಾಜಕೀಯ ಭವಿಷ್ಯ ದ ತೇಜೋವಧೆ ಮಾಡುತ್ತಾ ತಮ್ಮ ರಾಜಕೀಯದ ಬೇಳೆ ಬೇಯಿಸುವುದನ್ನು ಈಗಲೂ ಬಿಡಲಿಲ್ಲ ಎನ್ನು ವುದು ನಿನ್ನೆ ಯ ಪತ್ರಿಕಾಹೇಳಿಕೆ ಯಲ್ಲಿ ಕಾಂಗ್ರೆಸ್ ನಾಯಕ ರಾದ ವಿನಯ್ ಕುಮಾರ್ ಸೊರಕೆ ಯವರು ಸಾಬೀತು ಪಡಿಸಿದ್ದಾರೆ . ಮುಸ್ಲಿಮರ ರಾಜಕೀಯ ಚಿಂತನೆಯು ದಿನ ದಿಂದ ದಿನಕ್ಕೆ ಬೆಳೆಯುವುದು ಸಹಿಸದೆ ತಮ್ಮ ಕ್ಷೇತ್ರ ದಲ್ಲಿ ತಮ್ಮ ಮುಂದೆ ಬರುವ ದಿನ ಗಳಲ್ಲಿ ಚುನಾವಣೆ ಗೆ ಪ್ರತಿಸ್ಪರ್ದಿ ಯಾಗಿ ಎಸ್ಡಿಪಿಐ ನಿಲ್ಲುವುದು ತಿಳಿದು ಹೇಗಾದರು ಮಾಡಿ ಎಸ್ಡಿಪಿಐ ಯನ್ನು ನಿರ್ನಾಮ ಮಾಡುವ ಉದ್ದೇಶ ದಿಂದ ಇಂತಹ ಹೇಳಿಕೆ ಕೊಡುವುದು ನಾಯಕರಾದ ಇವರಿಗೆ ತಕ್ಕು ದಲ್ಲ. ಸಂವಿಧಾನ ದಮೇಲೆ ನಂಬಿಕೆ ಇಟ್ಟ ಜನಪರ ಪ್ರಾಮಾಣಿಕ ಪ್ರಜಾಸಾತ್ತಾತ್ಮಕ ಜಾತ್ಯತೀತ ಪಕ್ಷ ವನ್ನು ಮುಗಿಸಲು ಹೊರಟ ಇವರಿಗೆ ಪ್ರಜಾಪ್ರಭುತ್ವ ದ ಮೇಲೆ ಇರುವ ನಂಬಿಕೆ ಎಷ್ಟುಯೆಂದು ಇದರಿಂದ ತಿಳಿಯುತ್ತದೆ.ಇವರು ಮಾಡುತಿರುವ ಆರೋಪಗಳೆಲ್ಲವನ್ನು ಸಾಬೀತು ಪಡಿಸಲು ನೀವು ಸಿದ್ದರಾಗಿ,ಅಲ್ಲಿಗೆ ಯಾವ ಸಮಯಕ್ಕೆನಾವು ಬರಬೇಕೆಂದು ತಿಳಿಸಿ,ಇಲ್ಲವೇ ರಾಜಕೀಯ ಜೀವನದಿಂದ ನಿವ್ರತ್ತಿ ಘೋಷಿಸಿ.ಸುಳ್ಳು ಆರೋಪಿಸಿ ಜನತೆಯ ದಾರಿ ತಪ್ಪಿಸುವ ಬುದ್ಧಿ ಬಿಟ್ಟುಬಿಡಿ ಮತ್ತು ನಿಮ್ಮದೇ ಪಕ್ಷದವರು ದಿನನಿತ್ಯ ಬಿಜೆಪಿ ಗೆ ಹೋಗುವುದನ್ನು ತಡೆಯಿರಿ,ಕಾಲಹರಣ ಮಾಡಿದಷ್ಟು ಮುಂದೆ ನೀವು ಬಿಜೆಪಿ ಗೆ ಹೋಗುವುದನ್ನು ನಾವೆಲ್ಲ ನೋಡಬೇಕಾದೀತು ಎಂದು ಎಸ್ಡಿಪಿಐ ಉಡುಪಿ ಜಿಲ್ಲಾಧ್ಯಕ್ಷ ಶಾಹಿದ್ ಅಲೀ ಎಚ್ಚರಿಕೆ ನೀಡಿದ್ದಾರೆ

