ಗಾಯತ್ರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ. ಉಡುಪಿ ನೂತನ ಅಲೆವೂರು ಶಾಖೆ ಶುಕ್ರವಾರ ವ್ಯವಹಾರ ಪರ್ಲ್ ಜೋಡುರಸ್ತೆ ವಾದಿರಾಜರಾವ್ ಉದ್ಘಾಟಿಸಿದರು ಭದ್ರತಾ ಕೊಠಡಿಯನ್ನು ಉದ್ಘಾಟಿಸಿ ಮಾತನಾಡಿದ ಜಯಕರ್ ಶೆಟ್ಟಿ ಇಂದ್ರಾಳಿ ಅವರುಸಹಕಾರಿ ಕ್ಷೇತ್ರವು ಅತ್ಯಂತ ವೇಗದಲ್ಲಿ ಅಭಿವೃದ್ಧಿ ಹೊಂದುತ್ತಿದ್ದು ಉಡುಪಿಯಲ್ಲಿ ಸುಮಾರು 780 ಸಹಕಾರಿ ಸಂಘಗಳು ನೋಂದಾಯಿಸಲ್ಪಟ್ಟಿದೆ 5,000 ಕೋಟಿ ಮೊತ್ತವು ಉಡುಪಿ ಜಿಲ್ಲೆಯಲ್ಲಿ ಸಹಕಾರಿ ಸಂಘದಲ್ಲಿ ಜನ ವಿನಿಯೋಗಿಸಿದ್ದಾರೆ ಏಕೆಂದರೆ ಸಂಸ್ಥೆಯಲ್ಲಿ ಜನರಿಗೆ ವಿಶ್ವಾಸವಿದ್ದು ರಾಜ್ಯದಲ್ಲಿ ಸುಮಾರು 48000 ಸಹಕಾರಿ ಸಂಘಗಳು ನೋಂದಾಯಿಸಲ್ಪಟ್ಟಿದೆ ಕೇಂದ್ರ ಸರಕಾರವು ಸಹಕಾರಿ ಕ್ಷೇತ್ರದಲ್ಲಿ 60 ತಿದ್ದುಪಡಿಗಳು ತಂದಿದ್ದು ರಾಜ್ಯದಲ್ಲಿಯೂ ತಿದ್ದುಪಡಿ ಆಗಿದೆ ವಾಣಿಜ್ಯ ಬ್ಯಾಂಕುಗಳು ಮತ್ತು ಖಾಸಗಿ ಬ್ಯಾಂಕುಗಳು ಹಳ್ಳಿ ಪ್ರದೇಶದಿಂದ ಪಟ್ಟಣ ಪ್ರದೇಶಕ್ಕೆ ಸ್ಥಳಾಂತರಿಸುತ್ತಿದ್ದಾರೆ ಆದರೆ ಸಹಕಾರಿ ಕ್ಷೇತ್ರಗಳು ಪಟ್ಟಣ ಪ್ರದೇಶದಿಂದ ಹಳ್ಳಿ ಕಡೆಗೆಯಲ್ಲಿ ಮಾಡುವ ಮುಖಾಂತರ ಗ್ರಾಮೀಣ ಪ್ರದೇಶದ ಕಟ್ಟಕಡೆ ಯಾ ವ್ಯಕ್ತಿಗೂ ಸಹಕಾರಿ ಕ್ಷೇತ್ರದಲ್ಲಿ ಸೇವೆ ನೀಡಬೇಕು ಅವರಿಗೆ ಆರ್ಥಿಕ ಸ್ವಾವಲಂಬಿ ಗಳಾಗಿ ಜೀವನ ನಡೆಸಲು ಸಾಲ ಸೌಲಭ್ಯಗಳನ್ನು ಅತ್ಯಂತ ವೇಗವಾಗಿ ನೀಡಬೇಕು ಎನ್ನುವ ಉದ್ದೇಶ ವನ್ನು ಇಟ್ಟುಕೊಂಡು ಇವತ್ತು ಹಲ್ಲಿ ಹಲ್ಲಿಗಳಲ್ಲಿ ಸಹಕಾರಿ ಕ್ಷೇತ್ರವನ್ನು ಸ್ಥಾಪನೆ ಮಾಡುತ್ತಿದ್ದಾರೆ ಎಂದು ಈ ಸಂದರ್ಭದಲ್ಲಿ ಹೇಳಿ ಸಂಸ್ಥೆಗೆ ಶುಭ ಹಾರೈಸಿದರು
ಅಧ್ಯಕ್ಷರು ಕೆ. ಜಯರಾಮ ಆಚಾರ್ಯ,ಮಾತನಾಡಿ”ಸಹಕಾರಿ ರಂಗವು ಕೇವಲ ಹಣಕಾಸು ವ್ಯವಹಾರಕ್ಕೆ ಸೀಮಿತವಾಗಿರದೆ, ಸಮಾಜದ ಕಟ್ಟಕಡೆಯ ವ್ಯಕ್ತಿಯ ಆರ್ಥಿಕ ಸಬಲೀಕರಣಕ್ಕೆ ಶಕ್ತಿಯಾಗಬೇಕು. ಆ ನಿಟ್ಟಿನಲ್ಲಿ ಗಾಯತ್ರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯು ಗ್ರಾಹಕರ ನಂಬಿಕೆಯನ್ನು ಗಳಿಸಿ, ಮುನ್ನಡೆಯಲಿದೆ,” ಎಂದು ಸಂಸ್ಥೆಯ ಅಧ್ಯಕ್ಷರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಆಶಯ ವ್ಯಕ್ತಪಡಿಸಿದರುಸರಳ ಸಾಲ ಸೌಲಭ್ಯ: “ಸ್ಥಳೀಯ ವ್ಯಾಪಾರಿಗಳು, ಸ್ವಸಹಾಯ ಸಂಘಗಳು, ಮಹಿಳೆಯರು ಮತ್ತು ಮಧ್ಯಮ ವರ್ಗದವರ ಆರ್ಥಿಕ ಅಗತ್ಯತೆಗಳನ್ನು ಗುರುತಿಸಿ, ಅತ್ಯಂತ ಸರಳ ಪ್ರಕ್ರಿಯೆಗಳ ಮೂಲಕ ಸಾಲ ಸೌಲಭ್ಯವನ್ನು ಒದಗಿಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ

ವಾದಿರಾಜರಾವ್ ಮಾತನಾಡಿ ಸಂಸ್ಥೆಗೆ ಶುಭ ಹಾರೈಸಿದರು ಮಾಧವಾನಿದಿ ಯನ್ನು ಪ್ರತಿಭಾ ಮಾಧವ ಆಚಾರ್ ಬಿಡುಗಡೆಗೊಳಿಸಿದರುಈ ಸಂದರ್ಭದಲ್ಲಿ ಯತೀಶ್ ಪೂಜಾರಿ (ಅಧ್ಯಕ್ಷರು, ಅಲೆವೂರು ಗ್ರಾಮ ಪಂಚಾಯತ್) 1 ಶ್ರೀ ಎ. ನಾಗರಾಜ ಆಚಾರ್ಯ (ಅಧ್ಯಕ್ಷರು, ಉಡುಪಿ ಗೋಲ್ಡ್ ಸ್ಮಿತ್ ಸೌಹಾರ್ದ ಕೋ ಆಪ್. ಸೊಸೈಟಿ ಅ.) t ಶ್ರೀ CA ಯು.ಬಿ. ಅಜಿತ್ ಕುಮಾರ್ (ಪ್ರಭಾಜತ್ & ಕಂ. ಉಡುಪಿ) ಶ್ರೀಮತಿ ಪ್ರತಿಭಾ ಮಾಧವ ಆಚಾರ್ (ನಿವೃತ್ತರು, ಎಸ್ಬಿಐ ಬ್ಯಾಂಕ್)ಶ್ರೀ ಕೆ. ಜಯರಾಮ ಆಚಾರ್ಯ ಶ್ರೀ ಮೋಹನ್ ಎಂ.ಪಿ.ಶ್ರೀ ಉಮೇಶ್ ಆಚಾರ್ಯ(ಅಧ್ಯಕ್ಷರು) (ಉಪಾಧ್ಯಕ್ಷರು) (ಪ್ರ. ವ್ಯವಸ್ಥಾಪಕರು)

ಆಡಳಿತ ಮಂಡಳಿ ನಿರ್ದೇಕರು ಎ. ಯೋಗೀಶ ಆಚಾರ್ಯ, ಶ್ರೀ ಕೆ. ಶ್ರೀಧರ ಆಚಾರ್ಯ, ಶ್ರೀ ಎಸ್ ಕಿಶೋರ ಆಚಾರ್ಯಶ್ರೀ ಮೋಹನದಾಸ ಸಿ ಆಚಾರ್ಯ, ಶ್ರೀ ಸತೀಶ ಆಚಾರ್ಯ, ಶ್ರೀ ಕೆ. ಪಾಂಡುರಂಗ ಆಚಾರ್ಯಶ್ರೀ ಅಶೋಕ್ ಕುಮಾರ್, ಶ್ರೀ ಎ.ಎಸ್ ಪ್ರಸನ್ನ ಆಚಾರ್ಯ, ಶ್ರೀಮತಿ ಶಶಿಕಲಾ ಪಿ. ಆಚಾರ್ಯ ಶ್ರೀಮತಿ ಮುಕ್ತಾ ಜಗದೀಶ ಹಾಗೂಶ್ರೀಮತಿ ವಿಜಯಲಕ್ಷ್ಮೀ ಶೇಖರ್, ಶ್ರೀಮತಿ ಮೋಹಿನಿ ಬಿ. ಆಚಾರ್ಯ (ನಾಮನಿರ್ದೇಶಕರು) ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು ಬಾಲೆದು ಸ್ವಾಗತವನ್ನು ಮೋಹನ್ ಎಂ ಪಿ ನೆರವೇರಿಸಿದರು ನಿರೂಪಣೆ ಉಮೇಶ್ ಆಚಾರ್ಯ ಧನ್ಯವಾದವನ್ನು ಪಾಂಡುರಂಗ ಆಚಾರ್ಯ ಮಾಡಿದರು


