×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಬಡಾ ಗ್ರಾ.ಪಂ ವ್ಯಾಪ್ತಿಯ ವಿವಿಧ ಕಾಮಗಾರಿಗಳ ಗುದ್ದಲಿ ಪೂಜೆ ಉದ್ಘಾಟನೆ ನೆರವೇರಿಸಿದ – ಶಾಸಕ ಗುರ್ಮೆ ಸುರೇಶ್ ಶೆಟ್ಟಿ

ಕಾಪು ವಿಧಾನಸಭಾ ಕ್ಷೇತ್ರದ ಬಡಾ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಕಾಮಗಾರಿಯ ಅಭಿವೃದ್ಧಿಗೆ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರ ಶಿಫಾರಸ್ಸಿನ ಮೇರೆಗೆ 55 ಲಕ್ಷ ರೂಪಾಯಿ ಅನುದಾನ ಮಂಜೂರಾಗಿದ್ದು ಇದರ ಗುದ್ದಲಿ ಪೂಜೆಯ ಹಾಗೂ ಉದ್ಘಾಟನೆಯನ್ನು ಇಂದು ದಿನಾಂಕ 28-03-2026 ರಂದು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ನೆರವೇರಿಸಿದರು.

ಬಡಾ ಗ್ರಾಮ ಪಂಚಾಯತ್ ವ್ಯಾಪ್ತಿಯ 4ನೇ ವಾರ್ಡಿನ ಬ್ರಹ್ಮಬೈದರ್ಕಳ ಗರೋಡಿ ಹತ್ತಿರದ ನಾರಾಯಣ ಪೂಜಾರಿ ಮನೆಯಿಂದ ವಾರಿಜಾ ಶೆಟ್ಟಿ ಮನೆ ರಸ್ತೆ ಕಾಂಕ್ರೀಟೀಕರಣ – 10 ಲಕ್ಷ, 1ನೇ ವಾರ್ಡಿನ ಗೋಪಾಲ ಸಾಲ್ಯಾನ್ ಮನೆಯಿಂದ ವೆಂಕಟೇಶ್ ನಾವಡರ ಗದ್ದೆ ತನಕ ರಸ್ತೆ ಕಾಂಕ್ರೀಟೀಕರಣ – 10 ಲಕ್ಷ, 6ನೇ ವಾರ್ಡಿನ ಶೈಲಾ ರವರ ಮನೆಯಿಂದ ಮುಖ್ಯ ರಸ್ತೆ ತನಕ ರಸ್ತೆ ಕಾಂಕ್ರೀಟೀಕರಣ – 10 ಲಕ್ಷ, 3ನೇ ವಾರ್ಡಿನ ಗರಡಿ ಮನೆ ನಾರಾಯಣ ಶೆಟ್ಟಿ ಮನೆಯಿಂದ ಕುಟ್ಟಿ ಪೂಜಾರಿ ಮನೆ ತನಕ ಕಾಂಕ್ರೀಟೀಕರಣ – 10 ಲಕ್ಷ, 8ನೇ ವಾರ್ಡಿನ ಉಚ್ಚಿಲ ಮೊಗವೀರ ಮಹಾಸಭೆಯ ಸಭಾಂಗಣ ಹಿಂಭಾಗ ಅಂಗನವಾಡಿ ಕಟ್ಟಡ ನಿರ್ಮಾಣ – 5 ಲಕ್ಷ, ಎರ್ಮಾಳ್ ಕೊಳದ ಬದಿಯಿಂದ ನೆಬಿಸ ಅಕ್ಕ ನವರ ಮನೆ ವರೆಗೆ ರಸ್ತೆ ಕಾಂಕ್ರೀಟೀಕರಣ – 5 ಲಕ್ಷ ಸೇರಿದಂತೆ ಒಟ್ಟು 50 ಲಕ್ಷ ರೂಪಾಯಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ 5 ಲಕ್ಷ ರೂಪಾಯಿ ಅನುದಾನದಲ್ಲಿ ಕುದ್ರೊಟ್ಟು ಬ್ರಹ್ಮ ಬೈದರ್ಕಳ ದೈವಸ್ಥಾನದಿಂದ ರಾಜೀವ ಶೆಟ್ಟಿ ಮನೆ ತನಕ ಅಭಿವೃದ್ಧಿಗೊಂಡ ರಸ್ತೆಯ ಉದ್ಘಾಟನೆ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಬಡಾ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಶಿವಕುಮಾರ್ ಮೆಂಡನ್, ಮಾಜಿ ಉಪಾಧ್ಯಕ್ಷರಾದ ದೀಪಕ್, ಮಾಜಿ ಸದಸ್ಯರಾದ ಚಂದ್ರಶೇಖರ್, ಇಂದಿರಾ ಶೆಟ್ಟಿ, ಹರಿಪ್ರಸಾದ್, ಶಕುಂತಳಾ, ಮೋಹಿನಿ, ಕಲಾವತಿ, ಸ್ಥಳೀಯರಾದ ವಸಂತ ದೇವಾಡಿಗ, ಕಮಲಾಕ್ಷ ಶಣೈ ಹಾಗೂ ಕಾರ್ಯಕರ್ತರು, ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *