
ಮಾಜಿ ಸಚಿವ ವಿನಯ್ ಕುಮಾರ್ ಸೊರಕೆಯವರು ಮಾತನಾಡಿ ಕಾಂಗ್ರೆಸ್ ಪಕ್ಷ ಎಂಬುದು ಒಂದು ಕುಟುಂಬ ಬೇರೆ ಬೇರೆ ಧರ್ಮ ಬೇರೆ ಬೇರೆ ಜಾತಿ ಬೇರೆ ಬೇರೆ ಭಾಷೆ ಎಂಬುದು ನಾವೆಲ್ಲರೂ ಈ ಕುಟುಂಬ ಎಂಬ ರೀತಿಯಲ್ಲಿ ಒಟ್ಟು ಸೇರಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಪ್ರತೀ ಗ್ರಾಮೀಣ ಸಮಿತಿ ಯಿಂದ ಒಬ್ಬರನ್ನು ಗುರುತಿಸಿ 25 ಮಂದಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು ರಾಹುಲ್ ಗಾಂಧಿ ಯವರು ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ 3570 ಕಿ. ಮಿ ಪಾದಯಾತ್ರೆ ಕೈಗೊಂಡಿದ್ದು ಇಂತಹ ಪಾದಯಾತ್ರೆ ಇತಿಹಾಸದಲ್ಲೇ ಇಲ್ಲ ಎಂದು ತಿಳಿಸಿದರು ಬಿ. ಜೆ. ಪಿ ಪಕ್ಷವು ಸಮಾಜದಲ್ಲಿ ಧರ್ಮವನ್ನು ಭಾಷೆಯ ಹೆಸರಲ್ಲಿ ಒಡೆಯುವ ಕೆಲಸ ಮಾಡುತದೆ ಸಂವಿದಾನವನ್ನು ಉಳಿಸಬೇಕು ದೇಶದ ಪ್ರಜಾಪ್ರಭುತ್ವ ಉಳಿಯ ಬೇಕು. ಎಲ್ಲರನ್ನು ಒಟ್ಟು ಸೇರಿಸುವ ಉದ್ದೇಶದಿಂದ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಕಾಪು ಕ್ಷೇತ್ರದಿಂದ 1000 ಜನ ಪಾದಯಾತ್ರೆಯಲ್ಲಿ ಭಾಗಿಯಾಗಬೇಕು ಪ್ರತೀ ಗ್ರಾಮ ಪಂಚಾಯತ್ ನಲ್ಲಿ 35 ಮಂದಿ ಭಾಗಿಯಾಗಬೇಕು ಎಂದು ಈ ಸಂದರ್ಭದಲ್ಲಿ ತಿಳಿಸಿದರು ಕಾರ್ಯಕ್ರಮದಲ್ಲಿ ವಿನಯ್ ಕುಮಾರ್ ಸೊರಕೆ,ಕೆ ಪಿ ಸಿ ವಕ್ತಾರ ಸುಧೀರ್ ಕುಮಾರ್ ಮುರೋಳಿ, ಕಾಪು ಬ್ಲಾಕ್ ಪ್ರಚಾರ ಸಮಿತಿಯ ವಕ್ತಾರ ಜಿತೇಂದ್ರ ಪುಟಾರ್ಧೋ,ಕಾಪು ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಂತಲತಾ ಶೆಟ್ಟಿ ಕಟಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಇಂದಿರಾ ಆಚಾರ್ಯ ಉಪಾಧ್ಯಕ್ಷರಾದ ಅಬೂಬಕ್ಕರ್,ಕೋಟೆ ಗ್ರಾಪಂ ಅಧ್ಯಕ್ಷ ಕಿಶೋರ್ ಅಂಬಾಡಿ,ಕುರ್ಕಾಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹೇಶ್ ಶೆಟ್ಟಿ ಉಪಾಧ್ಯಕ್ಷೆ ಸಿಮಿಮತಾಯಿಸ್, ಕಟಪಾಡಿ,ಕೋಟೆ,ಕುರ್ಕಾಲು,ಇನ್ನಂಜೆ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರಾದ,ಶ್ರೀಕರ್ ಅಂಚನ್,ಸುರೇಶ್,ರಾಜೇಶ್ ಶೆಟ್ಟಿ ಪಾಂಗಾಳ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವಿನಯ್ ಬಲ್ಲಾಳ್, ಪ್ರಶಾಂತ್ ಜತ್ತನ್ ಎಸ್ ಸಿ ಘಟಕದ ಜಿಲ್ಲಾಧ್ಯಕ್ಷ ಜಯ್ ಕುಮಾರ್ , ಅಲ್ಪಸಂಖ್ಯಾತರ ಘಟಕದ ಬ್ಲಾಕ್ ಅಧ್ಯಕ್ಷ ಶರ್ಪುಧೀನ್,ಯುತ್ ಬ್ಲಾಕ್ ಅಧ್ಯಕ್ಷ ರಮೀಜ್ ಹುಸೇನ್ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಐಡಾಗಿಬ್ಬ ಡಿಸೋಜ ಜಯರಾಮ ಬಲ್ಲಾಳ್, ಅಶೋಕ್ ಬಾಯಾರಿ ಪ್ರಭಾಕರ ಆಚಾರ್ಯ ಗ್ರಾಮ ಪಂಚಾಯಿತಿ ಸದಸ್ಯರು ಹಿರಿಯ ಕಿರಿಯ ಕಾರ್ಯಕರ್ತರು,ಬೂತ್ ಅಧ್ಯಕ್ಷರು,ಮುಖಂಡರು ಉಪಸ್ಥಿತರಿದ್ದರು ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಕರ್ ಅಂಚನ್ ಸ್ವಾಗತಿಸಿ, ಪ್ರಭಾ ಬಿ ಶೆಟ್ಟಿ ವಂದಿಸಿದರು ಪ್ರಭಾಕರ್ ಪಾಲನ್ ಹಾಗೂ ಪ್ರಭಾ ಬಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು

