ಪಣಂಬೂರು ಠಾಣೆಯಲ್ಲಿ ವೃತ್ತ ನಿರೀಕ್ಷರಾಗಿ ಸೇವೆ ಸಲ್ಲಿಸಿ ,ಇತ್ತೀಚಿಗೆ ಕಾಪು ಠಾಣೆಗೆ ವರ್ಗಾವಣೆಗೊಂಡಿರುವ ಅಜ್ಮತ್ ಅಲಿ ರವರಿಗೆ ಕ ರ ವೇ(ಯುವಸೇನೆ)ವತಿಯಿಂದ ಹೂ ಗುಚ್ಛ ನೀಡಿ ಅಭಿನಂದನೆ ಸಲ್ಲಿಸಿದರು. ಕ ರ ವೇ(ಯುವಸೇನೆ)ಉಡುಪಿ ಜಿಲ್ಲಾಧ್ಯಕ್ಷರಾದ ರೆಹಮಾನ್ ಪಡುಬಿದ್ರಿ,ಕಾಪು ತಾಲೂಕು ಅಧ್ಯಕ್ಷರಾದ ಸುಜಿತ್ ಪಡುಬಿದ್ರಿ,ಪಡುಬಿದ್ರಿ ಗ್ರಾಮ ಪಂಚಾಯತ್ ಸದಸ್ಯರಾದ ಎಮ್ ಎಸ್ ಶಾಫಿ,ಕ ರ ವೇ ಯುವಸೇನೆ ಪಡುಬಿದ್ರಿ ಘಟಕದ ಅಧ್ಯಕ್ಷರಾದ ಜಮಾಲ್ ಪಡುಬಿದ್ರಿ,ಕಾಪು ಸಂಚಾಲಕರಾದ ಜುಬೈರ್ ಪಡುಬಿದ್ರಿ ಉಪಸ್ಥಿತರಿದ್ದರು

