×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಪಡುಬಿದ್ರಿ ಬಂಟರ ಸಂಘದ ಸಹಯೋಗದೊಂದಿಗೆ “ಆಟಿದ ಗೌಜಿ” ಸಮಾರಂಭ

ಪಡುಬಿದ್ರಿ : ಬಂಟರ ಸಂಘ ಪಡುಬಿದ್ರಿ, ಬಂಟ್ಸ್ ವೆಲ್ಫೇರ್ ಟ್ರಸ್ಟ್‌, ಬಂಟರ ಮಹಿಳಾ ವಿಭಾಗದ ಸಹಯೋಗದೊಂದಿಗೆ ಆಟಿದ ಗೌಜಿ ಸಮಾರಂಭ ಪಡುಬಿದ್ರಿ ಬಂಟರ ಭವನದಲ್ಲಿ ಜರಗಿತು. ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ ಉದ್ಘಾಟಿಸಿದರು.ಶಾವಿಗೆ ಮಣೆಯಿಂದ ಶಾವಿಗೆ ಮಾಡುವ ಮೂಲಕ ಕಾರ್ಯಕ್ರಮವನ್ನು ವಿಷೇಶವಾಗಿ ಉದ್ಘಾಟಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಸಾಹಿತಿ, ಯಕ್ಷಗಾನ ಕಲಾವಿದೆ ಎಕ್ಕಾರು ದಯಾಮಣಿ ಸುಧಾಕರ ಶೆಟ್ಟಿ ಮಾತನಾಡಿ, ಆಟಿ ಅನಿಷ್ಟದ ತಿಂಗಳು ಅಲ್ಲ. ಆರೋಗ್ಯಪೂರ್ಣ ತಿಂಗಳು. ನಮ್ಮ ಪರಂಪರೆ ಋಷಿ ಮತ್ತು ಕೃಷಿ ಪರಂಪರೆಯಿಂದ ಮುಂದುವರೆದಿದೆ. ಮನಸಿನ ಹಸಿವು ತಣಿಸಿದರೆ ಸಾಲದು ಜ್ಞಾನದ ಹಸಿವನ್ನು ನೀಗಿಸುವುದು ಮುಖ್ಯ. ಸಾಗುವಳಿಯನ್ನು ಕಟ್ಟಿಕೊಂಡು ನಮ್ಮ ಭೂಮಿ ಬೇರೆಯವರ ಪಾಲಾದರೂ ಸಾಧಿಸುವ ಛಲದ ಬಂಟರು ನಾವಾದೆವು ಎಂದು ಹೇಳಿದರು. ಬಂಟ್ಸ್ ವೆಲ್ಫೇರ್ ಪಡುಬಿದ್ರಿ ಅಧ್ಯಕ್ಷ, ಜಾನಪದ ವಿದ್ವಾಂಸ ಡಾ. ವೈ. ಎನ್. ಶೆಟ್ಟಿ ಮಾತನಾಡಿ, ಆಟಿ ಆಷಾಢವಲ್ಲ. ಆಟಿ ತುಳುವರ ಆಟಿ. ಆಟಿ ಭೂಮಿಗೆ ಚೇತನವಾಗಿ ಮಳೆಯಿಂದ ಜಲ ಸಂಗ್ರಹದ ಸಮಯ. ಆಟಿ ಒಂದು ದಿನದ ಕಾರ್ಯಕ್ರಮವಲ್ಲ ಎಂದು ಹೇಳಿದರು

. ಕೃಷಿಕ ಶಿವರಾಮ ಶೆಟ್ಟಿ ಮತ್ತು ಉದ್ಯಮಿ ಪಲ್ಲವಿ ಸಂತೋಷ್ ಕುಮಾರ್ ಶೆಟ್ಟಿಯವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ವಹಿಸಿದ್ದರು. ವೇದಿಕೆಯಲ್ಲಿ ಪಡುಬಿದ್ರಿ ಬಂಟರ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ಭಾರತಿ ಭಾಸ್ಕರ ಶೆಟ್ಟಿ, ಪಡುಬಿದ್ರಿ ಬಂಟರ ಸಂಘದ ಸಿರಿಮುಡಿ ದತ್ತಿನಿಧಿ ಸ್ಥಾಪಕ ಸಾಂತೂರು ಭಾಸ್ಕರ ಶೆಟ್ಟಿ, ಬಂಟರ ಸಂಘದ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಪಡುಹಿತ್ಲು, ಕೋಶಾಧಿಕಾರಿ ರವಿ ಶೆಟ್ಟಿ ಗುಂಡ್ಲಾಡಿ, ಯುವ ಬಂಟರ ಸಂಘದ ಅಧ್ಯಕ್ಷ ಸುಜಿತ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯದರ್ಶಿ ಸುಶ್ಮಿತಾ ಎಮ್ ಶೆಟ್ಟಿ, ಕೋಶಾಧಿಕಾರಿ ಲತಾ ಪಿ. ಶೆಟ್ಟಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *