ಉಡುಪಿ ಧರ್ಮಪ್ರಾಂತ ಧರ್ಮಾಧ್ಯಕ್ಷ ಡಾ| ಜೆರಾಲ್ಡ್ ಐಸಾಕ್ ಲೋಬೊ ಅವರು ಉತ್ಸವದ ಧ್ವಜಾರೋಹಣ ಮಾಡಿ ಬಲಿಪೂಜೆ ಸಮರ್ಪಿಸಿದರು. ಕೈಯಲ್ಲಿ ಬರೆದ ಬೈಬಲ್, ಮಕ್ಕಳಿಗಾಗಿ ಸಂತರ ಪುಸ್ತಕ ಮತ್ತು ವಂ। ಲೂಯಿಸ್ ಡೇಸಾ ಬರೆದ ಶಿಲುಬೆಯ ಮಾರ್ಗ ಪುಸ್ತಕ ವನ್ನು ಬಿಡುಗಡೆ ಮಾಡಿದರು.ಈವರ್ಷ ಉತ್ಸವದ ವೇದವಾಕ್ಯ ಭರವಸೆಯು ನಮ್ಮನ್ನು ನಿರಾಸೆ ಮಾಡುದಿಲ್ಲ ಪಾಲನ ಮಂಡಳಿ ಉಪಾಧ್ಯಕ್ಷ ಸಂತೋಷ್ ಡಿ’ಸಿಲ್ವ ಸಂದೇಶ ನೀಡಿದರು. ಉಳಿದ ಪೂಜೆಗಳನ್ನು ಕ್ಯಾರಿತಾಸ್ ಇಂಡಿಯಾದ ಕಾರ್ಯ ನಿರ್ವಾಹಕ ನಿರ್ದೇಶಕ ಧರ್ಮಗುರು ಅನಿಲ್ ಕ್ರಾಸ್ತಾ, ಮಂಗಳೂರು ಸೈಂಟ್ ಆನ್ಸ್ ಫೈರಿ ವಂಗ ಪ್ರಕಾಶ್ ಜೋಸೆಫ್ ಲೋಬೊ, ಸೈಂಟ್ ಸೆಮಿನರಿ ಡಾ। ಪ್ರವೀಣ್ ಜಾಯ್ ಸಲ್ದಾನಾ ವಂ। ಐವನ್ ಡಿ’ಸೋಜಾ, ಬೈಂದೂರು ಚರ್ಚ್ನ ವಂ| ವಾಲ್ಟ ಡಿ’ಸೋಜಾ, ಉಡುಪಿ ಧರ್ಮಕ್ಷೇತ್ರದ ಕುಲಪತಿ ವಂ। ರೋಶನ್ ಡಿ’ಸೋಜಾ ನೆರವೇರಿಸಿದರು.


