×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಪಾಂಗಾಳದ 30ನೇ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಂಭ್ರಮ: ಮಣ್ಣಿನೊಂದಿಗೆ ಸಂಭ್ರಮಿಸಿದ ಭಕ್ತರು; ‘ತುಳುನಾಡ ಮಾಣಿಕ್ಯ’ ಅರವಿಂದ ಬೋಳಾರ್‌ ಅವರಿಂದ ಕಾರ್ಯಕ್ರಮ ಉದ್ಘಾಟನೆ

30 ವರ್ಷಗಳ ಹಿಂದೆ ತಮ್ಮ ಕಷ್ಟ ಹೇಳಿಕೊಳ್ಳಲು ಇಷ್ಟ ಪಡೆದುಕೊಳ್ಳಲು ಭಕ್ತರು ಪ್ರಾರಂಭ ಮಾಡಿದ ಶ್ರೀt ಗಣೇಶೋತ್ಸವ ಇವತ್ತು ಸಾವಿರಾರು ಭಕ್ತರ ಹೃದಯದಲ್ಲಿ ಶ್ರೀ ಗಣೇಶ ಪೂಜಿಸಿಕೊಳ್ಳುತ್ತಿದ್ದಾನೆ ಭಕ್ತರು ತಾವಾಗಿ ಬಂದು ಸೇವೆ ಮಾಡಿ ಸಂಭ್ರಮಿಸಿದ್ದಾರೆ ಇದಕ್ಕೆ ಈ ದಿನದ ಇಷ್ಟೊಂದು ಸಂಭ್ರಮದ ಕೆಸರ್ ಡುವಂಜಿ ದಿನ ಮಣ್ಣಿನೊಂದಿಗೆ ಆಟ ಸಾಕ್ಷಿಯಾಗಿದೆ ಎಂದು ಪಾಂಗಳ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ನ್ಯಾಯವಾದಿ ಶಿವಾನಂದ ಅಮೀನ್ ಹೇಳಿದರು ಮುಂದೆ 14 , 15, ಮತ್ತು 16ನೇ ತಾರೀಖಿನಂದು ನಡೆಯುವ ಶ್ರೀ ಗಣೇಶನ ಎಲ್ಲಾ ಸಂಭ್ರಮದಲ್ಲಿ ತಾವೆಲ್ಲರೂ ಭಾಗವಹಿಸಬೇಕು ನಮ್ಮೊಂದಿಗೆ ಸಹಕರಿಸಬೇಕು ಎಂದು ಕೇಳಿಕೊಂಡು ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್ ಕಾರ್ಯಕ್ರಮವನ್ನು ಶ್ರೀ ಜನಾರ್ಧನನ ತೀರ್ಥ ಮತ್ತು ಹಾಲನ್ನು ಗದ್ದೆಗೆ ಎರೆದು ಉದ್ಘಾಟಿಸುತ್ತಾ ಮೊದಲು ನಾನು ಕೂಡ ಕೃಷಿಕನಾಗಿ ಮಣ್ಣಿನೊಂದಿಗೆ ಇದ್ದವನು ಈಗ ಮಾತ್ರ ಕಲಾವಿದನಾಗಿದ್ದೇನೆ ಪ್ರತಿಯೊಬ್ಬರೂ ಜೀವನ ಮಾಡುತ್ತಿರುವ ಈ ಮಣ್ಣಿನ ಬೆಲೆಯು ಕಟ್ಟಲಾರದು ಮನುಷ್ಯ ಎಷ್ಟೇ ಬೆಳೆದರೂ ಮಣ್ಣನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎಂದು ತಾವೆಲ್ಲರೂ ಗಣೇಶನ ಕೃಪೆಗೆ ಪಾತ್ರರಾಗಿ ಎಂದು ಆಶಿಸಿದರು ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಉದ್ಯಮಿ ಪಾಂಗಾ ಳ ಶ್ರೀ ಗೋವಿಂದ ಶೆಟ್ಟಿಯವರು ನ್ಯಾಯವಾದಿ ಶಾಂತರಾಮ್ ಶೆಟ್ಟಿ, ಬಿ ಓ ಬಿ ಬ್ಯಾಂಕ್ ಮ್ಯಾನೇಜರ್ ಮಹೇಂದ್ರ ಕುಮಾರ್ ಶರ್ಮ ಖ್ಯಾತ ಯೌಟ್ಯೂಬ್ ರ್ ಪ್ರಜ್ವಲ್ ಶೆಟ್ಟಿ, ಸಿಎ ಬ್ಯಾಂಕ್ ಅಧ್ಯಕ್ಷರು ಪಾಂಗಳ ರಾಜೇಶ್ ರಾವ್ ಉಪಸ್ಥಿತರಿದ್ದರು ಸಂಪಶೆಟ್ಟಿ ಮನೆತನದವರು ಗದ್ದೆ ಯ ವ್ಯವಸ್ಥೆ ಮಾಡಿದರು ದೇವಸ್ಥಾನ ದ ಅರ್ಚಕರು ಸುಬ್ರಮಣ್ಯ ಭಟ್ ಬಾಲಕೃಷ್ಣ ಭಟ್, ಕಾರ್ಯಕ್ರಮದಲ್ಲಿ ನಮ್ಮನ್ನು ರಂಜಿಸಿದ ಚಿಯರ್ ಬಾಯ್ ಚೇತನ್ ಸುಭಾಸ್ ನಗರ ಗೇಮ್ಸ್ ಆಯೋಜಕರು ರಾಗಿ ತ್ರಿಷಾ ಕಾಲೇಜು ಪಿಟಿ ಸರ್ ಶಶಿಕಿರಣ್, ಕೋಣ ವನ್ನು ಕಲ್ಲಟ್ಟೆ ಪ್ರಶಾಂತ್ ಶೆಟ್ಟಿ, ಪ್ರಾಥಮಿಕ ಚಿಕಿತ್ಸೆ ಸಂದೇಶ್ ಸೇರಿಗಾರ್

Leave a Reply

Your email address will not be published. Required fields are marked *