ಅನಿವಾಸಿ ಭಾರತೀಯ ಉದ್ಯಮಿ ಹಾಗೂ ಸಮಾಜ ಸೇವಕ ಇಕ್ರಮ್ ಮೊಹಮ್ಮದ್ ರಿಗೆ ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದಿಂದ ಸನ್ಮಾನಿಸಲಾಯಿತು
ಇಕ್ರಮ್ ಮೊಹಮ್ಮದ್ ರವರು 2000 ರಿಂದ 2004 ರವರೆಗೆ ಏನ್.ಎಸ್.ಯು. ಐ ಉಡುಪಿ ಜಿಲ್ಲೆಯ ಕ್ರಿಯಾ ಶೀಲಾ ಸದಸ್ಯರಾಗಿ,ಪ್ರಸ್ತುತ ದುಬೈ ಅಲ್-ಕಮಾರ್ ಟ್ರಸ್ಟ್ ಮೂಳೂರು ಇದರ ಅಧ್ಯಕ್ಷರಾಗಿ ಹತ್ತಾರು ಸಾಮಾಜಿಕ ಹಾಗೂ ಧಾರ್ಮಿಕ ಶೈಕ್ಷಣಿಕವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಶರ್ಫುದ್ದಿನ್ ಶೇಕ್, ಕಾಂಗ್ರೆಸ್ ಮುಖಂಡರಾದ ಫಾರೂಕ್ ಚಂದ್ರನಗರ,ವಕ್ಫ್ ಬೋರ್ಡ್ ಸಲಹ ಸಮಿತಿ ಉಡುಪಿ ಜಿಲ್ಲಾ ಸದಸ್ಯರಾದ ಅಬ್ದುಲ್ ಹಮೀದ್ ಯೂಸುಫ್, ಕಾಪು ಪುರಸಭೆ ಸದಸ್ಯರಾದ ಆಸೀಫ್ ಮೂಳೂರು ಉಪಸ್ಥಿತರಿದ್ದರು

