ನಮ್ಮೆಲ್ಲರ ಮಾರ್ಗದರ್ಶಕರೂ,ಧಾರ್ಮಿಕ ಪಂಡಿತರೂ,ಸಮಸ್ತ ಕೇರಳ ಜಮೀಯುತುಲ್ ಉಲಮಾಕೇಂದ್ರ ಮುಷಾವರ ಸದಸ್ಯರು,ಕರ್ನಾಟಕ ಮುಸ್ಲೀಂ ಜಮಾತ್ ರಾದ್ಯ ನಿರ್ದೇಶಕರು, ದಕ್ಷಿಣ ಕನ್ನಡ ಜಿಲ್ಲಾ ಸಂಯುಕ್ತ ಖಾಜಿಯಾದ , ಸಯ್ಯದ್ ಫಝಲ್ ಅಲ್ ಬುಖಾರಿ ಕೂರತ್ ತಂಞಲ್ ಇವರ ನಿಧನ ಇಡೀ ಸಮಾಜಕ್ಕೆ ತುಂಬಲಾರದ ನಷ್ಟ.ಎಲ್ಲಾ ದರ್ಮದವರನ್ನು ಗೌರವಿಸುತ್ತಾ ಹಲವಾರು ಸಮಾಜ ಕಲ್ಯಾಣದಂತಹ ನಾಡಿಗೆ ಕಾರ್ಯಕ್ರಮ ಗಳನ್ನು ನೀಡುತ್ತಾ ಬಡ ಮಕ್ಕಳಿಗೆ ಆಸರೆ ಆಗಿ ನಾಡಿನ ಎಲ್ಲಾ ವರ್ಗದ ಜನರಿಗೆ ಒಳ್ಳೆಯದನ್ನು ಬಯಸುತ್ತಿದ್ದರು ಅವರ ಮಾರ್ಗದರ್ಶನ ಪಡೆದು ಸಾವಿರಾರು ಮಂದಿ ಯಸಶ್ವಿಯಾಗಿದ್ದಾರೆ .ನಾನು ಸಹ ಅವರ ಹಲವಾರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರ ಆಶೀರ್ವಾದಗಳನ್ನು ಪಡೆದಿದ್ದೆ .ಅದೆಷ್ಟೊ ಸಾವಿರಾರು ಜನರ ಪ್ರೀತಿಗೆ ಪಾತ್ರರಾಗಿದ್ದ ತಂಞಲ್ ರವರ ಮರಣ ಅವರ ಅನುಯಾಯಿಗಳಿಗೆ ಆಘಾತ ಉಂಟಾಗಿದೆ ಶರ್ಫುದ್ದೀನ್ ಶೇಖ್ ಅಧ್ಯಕ್ಷರು: ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಸಂತಾಪ ಸೂಚಿಸಿದ್ದಾರೆ

