ಸಂವಿಧಾನದ ಅನ್ವಯ ಪ್ರಜಾಪ್ರಭುತ್ವ ದ ಅಡಿಯಲ್ಲಿ ಸರಕಾರ ರಚಿಸಿ ಸಾಗುತ್ತಿರುವ ನಮ್ಮ ದೇಶದಲ್ಲಿ ಸಂವಿಧಾನದ ಅಡಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿ ಈಗ ಸಂವಿಧಾನ ವಿರೋಧಿ ಹೇಳಿಕೆ ನೀಡುತ್ತಿರುವ ಉತ್ತರ ಕನ್ನಡದ ಸಂಸದ ಅನಂತ ಕುಮಾರ್ ಹೆಗಡೆ ವಿರುದ್ಧ ಇದೇ ಶುಕ್ರವಾರ 15 – 03 – 2024 ರಂದು ಸಂಜೆ 4 ಘಂಟೆಗೆ ಉಡುಪಿ ಅಜ್ಜರಕಾಡು ಹುತಾತ್ಮ ಸ್ಮಾರಕದಲ್ಲಿ ದಲಿತ ಸಂಘರ್ಷ ಸಮಿತಿ ಮತ್ತು ಸಮಾನ ಮನಸ್ಕ ಸಂಘಟನೆ ಗಳು ಒಟ್ಟಾಗಿ ಬ್ರಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು …..ಎಲ್ಲಾ ಸಂವಿಧಾನ ಪರ ಮತ್ತು ಪ್ರಜಾಪ್ರಭುತ್ವ ವಾದಿ ಮನಸುಗಳು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡು ಸಂವಿಧಾನ ಬದಲಾಯಿಸಲೆಂದೇ ನಾವು ಬಂದಿದ್ದು.….ಮತ್ತು 400 ಸಂಸದರನ್ನು ಕೊಡಿ ಈ ಸಂವಿಧಾನ ಕ್ಕೆ ತಿದ್ದುಪಡಿ ಮಾಡುತ್ತೇವೆ ಎಂದು ಸಂವಿಧಾನ ವಿರೋಧಿ ಹೇಳಿಕೆ ಕೊಡುತ್ತಿರುವ ಸಂಸದ ಅನಂತ ಕುಮಾರ್ ಹೆಗಡೆ ವಿರುದ್ಧ ಪ್ರತಿಭಟನೆಯಲ್ಲಿ ಎಲ್ಲಾ ಸಮಾನ ಮನಸ್ಕರು ಪಾಲ್ಗೊಂಡು ಪ್ರತಿಭಟನೆ ಯನ್ನು ಯಶಸ್ವಿ ಗೊಳಿಸಬೇಕಾಗಿ ಸುಂದರ ಮಾಸ್ತರ್ ಜಿಲ್ಲಾ ಪ್ರಧಾನ ಸಂಚಾಲಕರು ದ.ಸಂ.ಸ.ಅಂಬೇಡ್ಕರ್ ವಾದ ವಿನಂತಿ…..

