
ಅಡುಗೆ ಅನಿಲ ಬೆಲೆ ಏರಿಕೆ ರಾಜ್ಯದ ಜನತೆಗೆ ಡಬಲ್ ಇಂಜಿನ್ ಸರ್ಕಾರದ ನೂತನ ಪ್ಯಾಕೇಜ್ ಘೋಷಣೆ ಸುರೇಶ್ ಶೆಟ್ಟಿ ಬನ್ನಂಜೆ ಇದೀಗಲೇ ಮೋದಿ ಸರಕಾರದ ಬೆಲೆ ಏರಿಕೆ ನೀತಿಯಿಂದ ಜನಸಾಮಾನ್ಯರು ಕಂಗೆಟ್ಟು ಹೋಗಿದ್ದಾರೆ ಆದರೂ ನಮ್ಮ ಜನತೆಯ ಬಗ್ಗೆ ಕಾಳಜಿಇಲ್ಲದ ಈ ಬಿಜೆಪಿ ಸರಕಾರ ಜನಸಾಮಾನ್ಯ ಬಳಸುವ ದಿನಬಳಕೆ ವಸ್ತುವಿನ ಮೇಲೆ ನಿರಂತರ ಬೆಲೆ ಏರಿಕೆ ಮಾಡಿ ಬಡವರನ್ನು ಕಾರ್ಮಿಕರನ್ನು ಮಧ್ಯಮ ವರ್ಗದವರನ್ನು ರೈತರನ್ನು ಬದುಕಲು ಬಿಡದೆ ಗದ ಪ್ರಹಾರ ಮಾಡುತ್ತಿದೆ ಇದೀಗ ಅಡುಗೆ ಅನಿಲದ ಬೆಲೆ ಗಿನ್ನಿಸ್ ದಾಖಲೆ ಬರೆಯಲು ಮುಂದಾಗಿದೆ ಈ ಬೆಲೆ ಏರಿಕೆ ನೀತಿಯೇ ಮೋದಿ ಹಾಗೂ ಬೊಮ್ಮಾಯಿ ಅವರ ಡಬ್ಬ ಇಂಜಿನ್ ಸರ್ಕಾರದ ನೂತನ ಚುನಾವಣಾ ಪ್ಯಾಕೇಜ್ ಈ ಬೆಲೆ ಏರಿಕೆ ಯಾರಿಗಾಗಿ ಅದಾನಿಗಾಗಿ ಯೋ ಅಂಬಾನಿ ಗಾಗಿ ಯೋ ಬೆಲೆ ಏರಿಕೆ ಮಾಡದೆ ದೇಶ ಹಾಗೂ ರಾಜ್ಯವನ್ನು ಆಳಲು ನಿಮಗೆ ಸಾಧ್ಯವಾಗದಿದ್ದರೆ ಅಧಿಕಾರ ಬಿಟ್ಟು ಕೆಳಗಿಳಿಯಿರಿ ಎಂದು ಉಡುಪಿ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಅಧ್ಯಕ್ಷ ಶ್ರೀ ಸುರೇಶ್ ಶೆಟ್ಟಿ ಬನ್ನಂಜೆ ಬೆಲೆ ಏರಿಕೆಯ ಬಗ್ಗೆ ಪ್ರತಿಕ್ರಿಯ ಸಿದ್ದಾರೆ

