
ಪಡುಬಿದ್ರಿ ಬಿಡು ರಾಷ್ಟ್ರೀಯ ಹೆದ್ದಾರಿ 66 ರ ಮಂಜು ಸಾಗಾಟದ ಲಾರಿ ಕಾರಿಗೆ ಡಿಕ್ಕಿ ಚಾಲಕ ಅಪಾಯದಿಂದ ಪಾರು ಘಟನೆ ಭಾನುವಾರ ಸಂಜೆ ನಡೆದಿದೆ ಲಾರಿಯನ್ನು ಅದರ ಚಾಲಕ ಅತೀವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಲಾರಿಯು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬಲಬದಿಯ ಡಿವೈಡರ್ ಮೇಲೆ ಹತ್ತಿ ಅದರ ಪಕ್ಕದ ಮಂಗಳೂರು -ಉಡುಪಿ ಏಕಮುಖ ಸಂಚಾರ ರಸ್ತೆಗೆ ಚಲಿಸಿ ಕಾರಿಗೆ ಡಿಕ್ಕಿ ಹೊಡೆದು ಲಾರಿಯು ರಸ್ತೆಯ ಬದಿಯಲ್ಲಿ ಮುಗುಚಿ ಬಿದ್ದಿರುತ್ತದೆ. ಡಿಕ್ಕಿ ಹೊಡೆದ ಪರಿಣಾಮ ಕಾರು ಸಂಪೂರ್ಣ ಜಖಂಗೊಂಡಿರುತ್ತದೆ ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿರುತ್ತದೆ.

