ತುಳುನಾಡಿನ ಜಾನಪದ ಕ್ರೀಡೆ ಎಂದೇ ಹೆಸರಾದ ಕಂಬಳ ಎರ್ಮಾಳು ತೆಂಕ- ಬಡ ಜೋಡುಕರೆ ಕಂಬಳಕ್ಕೆ ಬುಧವಾರ ಭೂಮಿ ಪೂಜೆಯನ್ನು ಎರ್ಮಾಳು ಬಡಕೊಟ್ಟು ಬಾಕಿಮಾರು ಗದ್ದೆಯಲ್ಲಿ ನೆರವೇರಿಸುವ ಮೂಲಕ ಸಮಿತಿಯು ಉತ್ಸವಕ್ಕೆ ಅಧಿಕೃತ ಸಿದ್ದತೆ ಆರಂಭಿಸಿತು. ವೇದಿಕೆಯಲ್ಲಿ ಎರ್ಮಾಳು ತೆಂಕ- ಬಡ ಜೋಡುಕರೆ ಕಂಬಳ ಲೋಗೋ ಅನಾವರಣಗೊಳಿಸಲಾಯಿತು. ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಗುದ್ದಲಿ ಪೂಜೆ ನೆರವೇರಿಸಿ ಕಂಬಳದ ಲಾಂಛನ ಬಿಡುಗಡೆಗೊಳಿಸಿದರು.


