ಹೆಬ್ರಿ ಕಾರ್ಕಳ ರಸ್ತೆ ತಾಣ ಬಳಿ ಗೋಪಾಲ ಭಂಡಾರಿ ಅಭಿಮಾನಿ ವೇದಿಕೆಯಿಂದ ನಿರ್ಮಾಣವಾದ ವೃತ್ತ ಹಾಗೂ ಪುತ್ಥಳಿಯನ್ನು ವೀರಪ್ಪ ಮೈಲಿ ಅನಾವರಣಗೊಳಿಸಿ ಮಾತನಾಡಿದ ವ್ಯಕ್ತಿ ನಿಷ್ಠೆ, ತತ್ವ ನಿಷ್ಠೆ, ಪಕ್ಷ ನಿಷ್ಠೆಯೊಂದಿಗೆ ಗೋಪಾಲ ಭಂಡಾರಿಯವರದು ಪರಿಪೂರ್ಣ ವ್ಯಕ್ತಿತ್ವ ನಾನು ಇಂದು ರಾಜಕೀಯದಲ್ಲಿ ಈ ಮಟ್ಟಕ್ಕೆ ಬೆಳೆಯಲು ಶಿಲೆಯಂತಿದ್ದ ನನಗೆ ಮೂರ್ತಿ ಸ್ವರೂಪ ಕೊಟ್ಟವರಲ್ಲಿ ಗೋಪಾಲ ಭಂಡಾರಿ ಕೂಡ ಒಬ್ಬರು ಎಂದು ಹೇಳಿದರು

ಈ ಸಂದರ್ಭದಲ್ಲಿ .ಭಂಡಾರಿ ಅವರ ಜೀವನ ಚರಿತ್ರೆ ಪುಸ್ತಕವನ್ನುವಿಧಾನಸಭಾ ಅಧ್ಯಕ್ಷಯು.ಟಿ. ಖಾದರ್ ಬಿಡುಗಡೆಗೊಳಿಸಿದರು. ವೇದಿಕೆಯ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ಮಾಜಿ ಮಂತ್ರಿಗಳಾದ ಬಿ. ರಮಾನಾಥ ರೈ, ವಿನಯ್ ಕುಮಾರ್ ಸೊರಕೆ, ಅಭಯಚಂದ್ರಜೈನ್, ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ ಕುಮಾರ್ ಶೆಟ್ಟಿ, ಪ್ರಕಾಶಿನಿ ಗೋಪಾಲ ಭಂಡಾರಿ ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಿನಾಥ್ ಭಟ್ ಎಂ ಎ ಗಫೂರ್ ಅಶೋಕ್ ಕುಮಾರ್ ಕೊಡವುರ್ ಮೊದಲಾದವರಿದ್ದರು.

