×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಬಡವರ ಅನ್ನಭಾಗ್ಯದ ಅಕ್ಕಿ ಅಕ್ರಮ ಸಾಗಾಟ: ಸೀಝ್ ಮಾಡಿದ ತಹಶಿಲ್ದಾರ್ ಪ್ರತಿಭಾ ಆರ್ ಬಡವರ ಅಕ್ಕಿ ಮಾರುವವರಿಗೆ ಖಡಕ್ ಎಚ್ಚರಿಕೆ ನೀಡಿದ ತಹಶಿಲ್ದಾರ್ ಪ್ರತಿಭಾ ಆರ್

ಕಾಪು ಪೇಟೆಯಲ್ಲಿ ಆಟೋರಿಕ್ಷಾದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಅನ್ನ ಭಾಗ್ಯ ಯೋಜನೆಯ 250 kg ಅಕ್ಕಿಯನ್ನು ಸೀಝ್ ಮಾಡಿದ ತಹಶಿಲ್ದಾರ್ ಡಾ.ಪ್ರತಿಭಾ ಆರ್ ಆರೋಪಿಗಳ ಮೇಲೆ FIR ದಾಖಲಿಸಿದ್ದಾರೆ. ಲವ ಕರ್ಕೇರ ಎನ್ನುವವರ ಖಚಿತ ಮಾಹಿತಿಯ ಮೇಲೆ ತಕ್ಷಣ ಸ್ಥಳಕ್ಕೆ ಧಾವಿಸಿದ ಆಹಾರ ನಿರೀಕ್ಷಕ ಲೀಲಾನಂದ್ ರವರು ಪೋಲೀಸರಿಗೆ ಮಾಹಿತಿ ನೀಡುತ್ತಾರೆ. ಅದರಂತೆ ಪೋಲೀಸರ ಸಹಕಾರದೊಂದಿಗೆ ಪ್ಯಾಸೆಂಜರ್ ಆಟೋದಲ್ಲಿ ಸಾಗಿಸುತ್ತಿದ್ದ 6 ಚೀಲಗಳಲ್ಲಿ ಇದ್ದ 250 kg ಅಕ್ಕಿಯನ್ನು ಮುಟ್ಟುಗೋಲು ಹಾಕಿಕೊಂಡು ಕಾಪು ಪೋಲೀಸ್ ಸ್ಟೇಷನ್ ಗೆ ತಂದು ದೂರು ನೀಡಿ FIR ದಾಖಲಿಸಿರುತ್ತಾರೆ. ಅಂದಾಜು ಬೆಲೆ 8500/- ಮಾರಾಟ ಮಾಡಲು ತಗೊಂಡು ಹೋಗ್ತಿದ್ವಿ
ಆರೋಪಿಗಳಾದ ಕಲಂದರ್ ಶಾಫಿ, ಉಬೈದುಲ್ಲ ರವರನ್ನು ವಿಚಾರಣೆಗೆ ಒಳಪಡಿಸಿದಾಗ “ಪಡಿತರದಾರರಿಂದ” 20 ರೂಪಾಯಿಯಂತೆ ಖರೀದಿಸಿದ್ದು ಹೆಚ್ಚಿನ ಬೆಲೆಗೆ ಮಾರಲು ತಗೊಂಡು ಹೋಗ್ತಿದ್ವಿ ಎಂದು ಬಾಯಿ ಬಿಟ್ಟಿದಾರೆ. ಕಾಪು ನ್ಯಾಯಬೆಲೆ ಅಂಗಡಿಯ ಅಕ್ಕಿ ಮತ್ತು ಇಲ್ಲಿ ಸಿಕ್ಕಿದ ಅಕ್ಕಿಯನ್ನು ಹೋಲಿಕೆ ಮಾಡಿ ನೋಡಿದಾಗ ಎರಡರಲ್ಲೂ ಸಾಮ್ಯತೆ ಇರುವುದು ಖಚಿತವಾಗಿದೆ. ಆಹಾರ ನಿರೀಕ್ಷಕರ ದೂರಿನ ಮೇಲೆ ಪ್ರಕರಣ ದಾಖಲಿಸಿಕೊಂಡು ಪೋಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಲಯದ ಮುಂದೆ ಹಾಜರುಪಡಿಸಲಾಗುವುದು. ತಹಶಿಲ್ದಾರ್ ಡಾ.ಪ್ರತಿಭಾ ಆರ್ ಹೇಳಿಕೆ ಬಡವರ ಅಕ್ಕಿಯನ್ನು ಮಾರಾಟ ಮಾಡೋದನ್ನು ಖಂಡಿತ ಸಹಿಸೋದಿಲ್ಲ. ಕಾಪು ತಾಲ್ಲೂಕಿನಲ್ಲಿ ಮತ್ತೆ ಈ ರೀತಿಯ ಪ್ರಕರಣ ಮರುಕಳಿಸದಂತೆ ವ್ಯವಸ್ಥೆಯನ್ನು ಬಿಗಿಗೊಳಿಸಲಾಗುವುದು. ಎಲ್ಲಾ ಪಡಿತರ ವಿತರಣಾ ಸೊಸೈಟಿಗಳ ಮೇಲೆ ತೀವ್ರ ನಿಗಾ ಇಡಲಾಗುವುದು. ಸಾರ್ವಜನಿಕರು ಪಡಿತರ ಅಕ್ಕಿಯನ್ನು ಸ್ವಂತ ಉಪಯೋಗಕ್ಕೆ ಮಾತ್ರ ಬಳಸಬೇಕು. ಅನ್ಯ ಉದ್ದೇಶಕ್ಕಾಗಿ ಬಳಸತಕ್ಕದ್ದಲ್ಲ. ಯಾರಿಗಾದರೂ ಈ ರೀತಿಯ ಪ್ರಕರಣಗಳು ಗಮನಕ್ಕೆ ಬಂದರೆ ತಹಶಿಲ್ದಾರ್ ಕಚೇರಿಗೆ ಮಾಹಿತಿ ನೀಡತಕ್ಕದ್ದು
ಎಂದು ತಹಶಿಲ್ದಾರ್ ಪ್ರತಿಭಾ ಆರ್ ಎಚ್ಚರಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಆಹಾರ ನಿರೀಕ್ಷಕರಾದ ಲೀಲಾನಂದ್, PSI ತೇಜಸ್ವಿ, ಲವ ಕರ್ಕೇರ ಮುಂತಾದ ಸಾರ್ವಜನಿಕರು ಹಾಜರಿದ್ದರು.

Leave a Reply

Your email address will not be published. Required fields are marked *