ಕಾಪು ಕ್ಷೇತ್ರ ಭಾವೈಕತೆಯ ನಾಡು ಇಲ್ಲಿ ಎಲ್ಲಾ ಜಾತಿ ಧರ್ಮದವರು ತುಂಭಾ ಅನೊನ್ಯತೆಯಿಂದ ಬದುಕುತ್ತಿದ್ದಾರೆ ಈ ಭಾಗದಲ್ಲಿ ಇಂತಹ ಪ್ರಕರಣ ಯಾವತ್ತೂ ನಡೆದಿಲ್ಲ ಕ್ರೈಸ್ತ ಭಾಂಧವರ ಶಿಲುಬೆಯೊಂದನ್ನು ಕಿಡಿಗೇಡಿಗಳು ಧ್ವಂಸ ಮಾಡಿದ ಪ್ರಕರಣದಿಂದ ಕೇವಲ ಕ್ರೈಸ್ತ ಸಮಾಜಕ್ಕೆಅಲ್ಲ ಎಲ್ಲಾ ಸಮಾಜದವರಿಗೂ ತೀವ್ರ ನೋವಾಗಿದೆ. ಈ ಘಟನೆ ಸಮಾಜದಲ್ಲಿ ಅಶಾಂತಿಯನ್ನು ಉಂಟುಮಾಡಲು ಕಿಡಿಗೇಡಿಗಳ ಹುನ್ನಾರ ವಾಗಿದ್ದು ಆದಷ್ಟು ಬೇಗ ಪೋಲೀಸ್ ಇಲಾಖೆ ನೈಜ ಅಪರಾಧಿಗಳನ್ನು ಬಂಧಿಸಿ ತನಿಖೆ ಮಾಡಿ ತಕ್ಕಮಟ್ಟದ ಶಿಕ್ಷೆ ನೀಡಬೇಕು,ಮತ್ತು ಮುಂದಿನ ದಿನಗಳಲ್ಲಿ ಇಂತಹ ಕೀಲು ಮಟ್ಟದ ಘಟನೆ ಮರುಕಳಿಸಬಾರದೆಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಅಧ್ಯಕ್ಷರಾದ ಶರ್ಫುದ್ದೀನ್ ಶೇಖ್ ಪೋಲೀಸ್ ಇಲಾಖೆಗೆ ಆಗ್ರಹಿಸಿದ್ದಾರೆ

