
ದೇಶದ ಜನತೆಯ ವಿಶ್ವಾಸ ಕಳೆದುಕೊಂಡ ಅವಿಶ್ವಾಸನೀಯ ಬಜೆಟ್ ಸುರೇಶ್ ಶೆಟ್ಟಿ ಬನ್ನಂಜೆ ಸನ್ಮಾನ್ಯ ನರೇಂದ್ರ ಮೋದಿಯವರು ಗುಜರಾತ್ ರಾಜ್ಯದ ಮುಖ್ಯಮಂತ್ರಿ ಆಗಿ 15 ವರ್ಷಗಳ ಕಾಲ ನಮ್ಮ ದೇಶದ ಪ್ರಧಾನಿಯಾಗಿ ಒಂಬತ್ತು ವರ್ಷಗಳ ಕಾಲ ಆಡಳಿತ ನಡೆಸಿದಂತಹ ಅನುಭ ವಿ ರಾಜಕಾರಣಿ ಆದರೆ ಇಂದು ಮಂಡಿಸಲ್ಪಟ್ಟ ಬಜೆಟ್ ಬಡಜನರ ಮಧ್ಯಮ ವರ್ಗದವರ ಕಾರ್ಮಿಕರ ರೈತರ ವಿರೋಧಿ ಬಜೆಟ್ ಎಂದು ಸಾಬೀತಾಗಿದೆ ಕೇವಲ ಸುಳ್ಳು ಹೇಳಿಕೆಗಳಿಂದ ಸುಳ್ಳು ಆಶ್ವಾಸನೆಗಳಿಂದ ತಾವು ಗೆಲುವು ಸಾಧಿಸಿ ಆಡಳಿತ ನಡೆಸುತ್ತೇವೆ ಎಂಬುದು ಬಿಜೆಪಿ ನಾಯಕರ ಭ್ರಮೆ ಅಷ್ಟೇ ಪೆಟ್ರೋಲ್ ಡೀಸೆಲ್ ಗ್ಯಾಸ್ ಜನಸಾಮಾನ್ಯರು ದಿನನಿತ್ಯ ಬಳಸುವ ಯಾವುದೇ ವಸ್ತುವಿನ ಬೆಲೆಯನ್ನು ಕಡಿಮೆಗೊಳಿಸದೆ ಜಿ ಎಸ್ ಟಿ ಯನ್ನು ಕಡಿಮೆಗೊಳಿಸದೆ ಮಂಡಿಸಿದ ಇಂದಿನ ಬಜೆಟ್ ಸಮರ್ಪಕ ನೀಯವಲ್ಲ ಎಂದು ಉಡುಪಿ ಬ್ಲಾಕ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಅಧ್ಯಕ್ಷರಾದ ಸುರೇಶ್ ಶೆಟ್ಟಿ ಬನ್ನಂಜೆ ಯವರು ಪ್ರತಿಕ್ರಿಯೆಸಿದ್ದಾರೆ

