ಕಾರ್ಕಳದ ಅತ್ತೂರಿನಲ್ಲಿರುವ ರಗ್ತಸಾಕ್ಷಿ ಸಂತ ಲಾರೆನ್ಸ್ ಅವರಿಗೆ ಸಮರ್ಪಿತವಾದ ಬಸಿಲಿಕಾದಲ್ಲಿ ವಾರ್ಷಿಕ ಮಹೋತ್ಸವವು ಅತ್ಯಂತ ಭವ್ಯತೆ ಮತ್ತು ಭಕ್ತಿಭಾವದಿಂದ ಆರಂಭವಾಯಿತು. ಮಹೋತ್ಸವದ ಆರಂಭದಲ್ಲಿ ಅದ್ಧೂರಿ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಅದ್ಭುತ ಕೃಪೆ ನೀಡುವ ಸಂತ ಲಾರೆನ್ಸ್ ಅವರ ಪ್ರತಿಮೆಯನ್ನು ಮೂಲ ಸ್ಥಾನದಿಂದ ಪೂಜಾ ಸ್ಥಳಕ್ಕೆ ಕರೆದೊಯ್ಯಲಾಯಿತು. ಈ ಮೆರವಣಿಗೆಯಲ್ಲಿ ಬಸಿಲಿಕಾದ
ರೆಕ್ಟರ್ ಅತೀ. ವಂ. ಅಲ್ಬನ್ ಡಿ’ಸೋಜಾರವರು ಪ್ರಾರ್ಥನೆಗಳನ್ನು ಮುನ್ನಡೆಸಿದರು.
ಹೋತ್ಸವದ ಮೊದಲ ದಿನದ ಬೆಳಿಗ್ಗಿನ ಬಲಿಪೂಜೆ ೭.೩೦ ಸಮಯಕ್ಕೆ ಬಸಿಲಿಕಾದ ಸಹಾಯಕ ಧರ್ಮಗುರು ವಂ. ಸ್ವಾ. ರಾಬಿನ್ ಸಾಂತುಮಾಯೆರ್ ನೆರವೇರಿಸಿದರು. ನಂತರ ಉಡುಪಿ ಧರ್ಮಕ್ಷೇತ್ರದ ದರ್ಮಾಧ್ಯಕ್ಷ ಪರಮಪೂಜ್ಯ ಜೆರಾಲ್ಡ್ ಐಸಾಕ್ ಲೋಬೋ ಅವರು ಧ್ವಜಾರೋಹಣ ನೆರವೇರಿಸಿದರು. ಬಸಿಲಿಕಾದ ಪಾಲನಾ ಸಮಿತಿಯ ಉಪಾಧ್ಯಕ ್ಷರಾದ ಶ್ರೀ ಸಂತೋಷ್ ಡಿಸಿಲ್ವಾರವರು ಸಭೆಯನ್ನು ಸ್ವಾಗತಿಸಿದರು ಮತ್ತು ಕಾರ್ಯದರ್ಶಿ ರೊನಾಲ್ಡ್ ನೊರೊನ್ಹರವರು ಧನ್ಯವಾದ ಪ್ರಸ್ತಾಪಿಸಿದರು. ನಿಯೋಜಿತ ಉಪಾಧ್ಯಕ ್ಷರಾದ ಶ್ರೀ ವಂದಿಶ್
ಮಥಿಯಾಸ್ ಮತ್ತು ಕಾರ್ಯದರ್ಶಿ ಶ್ರೀ ಮೆಲ್ವಿನ್ ಕ್ಯಾಸ್ಟೆಲಿನೋ ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಧ್ವಜಾರೋಹಣದ ನಂತರ, ಪರಮಪೂಜ್ಯ ಜೆರಾಲ್ಡ್ ಐಸಾಕ್ ಲೋಬೋರವರು ದಿವ್ಯ ಜ್ಯೋತಿ (ದೈವಾರಾಧನ ಆಯೋಗ) ಪ್ರಕಟಿಸಿದ ನೂತನ ಪುಸ್ತಕವನ್ನು ಬಿಡುಗಡೆ ಮಾಡಿದರು. ಈ ಪುಸ್ತಕದಲ್ಲಿ ದಿನನಿತ್ಯದ ಪ್ರಾರ್ಥನೆಗಳು ಮೂರು ಲಿಪಿಗಳಲ್ಲಿ ಮುದ್ರಿತವಾಗಿವೆ. ಅವರು “ಉತ್ತಮ ಸಮಾರಿಯಾಗಾರ” (ಉooಜ Sಚಿmಚಿಡಿiಣಚಿಟಿ) ಉಪಮೆಯನ್ನು ಆಧರಿಸಿದ ಹೊಸ ಧಾರಾವಾಹಿ ದೃಶ್ಯ ಚಿತ್ರಣವನ್ನು ಸಂಕೇತಾತ್ಮಕವಾಗಿ ಬಿಡುಗಡೆ ಮಾಡಿದರು. ಈ ದೃಶ್ಯ ಚಿತ್ರಣವನ್ನು ಕಾರ್ಕಳ ಪಟ್ಟಣದ zs Àರ್ಮಕೇಂದ್ರದ ಧರ್ಮಗುರು ವಂ. ಕ್ಲೆಮೆಂಟ್ ಮಸ್ಕರೇನ್ಹಾಸ್ ಅವರು ಸಿದ್ಧಪಡಿಸಿದ್ದಾರೆ.
ಧರ್ಮಾದ್ಯಕ್ಷರು ಅನೇಕ ಧರ್ಮಗುರುಗಳೊಂದಿಗೆ ಸಂಯುಕ್ತವಾಗಿ ಮಹೋತ್ಸವದ ಭವ್ಯ ಬಲಿಪೂಜೆಯನ್ನು ಆಚರಿಸಿದರು. ತಮ್ಮ ಉಪದೇಶದಲ್ಲಿ ಅವರು ಪವಿತ್ರ ಗ್ರಂಥವನ್ನು ಓದುವ ಮಹತ್ವವನ್ನು ಹಾಗೂ ದೇವರ ವಾಕ್ಯದ ಬೆಳಕಿನಲ್ಲಿ ಜೀವನವನ್ನು ಪುನರ್ವ್ಯಾಖ್ಯಾನಿಸುವ ಅಗತ್ಯವನ್ನು ಒತ್ತಿಹೇಳಿದರು. ಈ ದಿನವನ್ನು “ದೇವರ ವಾಕ್ಯದ ಭಾನುವಾರ” ಎಂದು ಆಚರಿಸಲಾಗಿತ್ತು.
ಸಂಜೆಯ ಭವ್ಯ ಸಂಯುಕ್ತ ಬಲಿಪೂಜೆಯನ್ನು ಮಂಗಳೂರು ಧರ್ಮಕ್ಷೇತ್ರದ ನಿವೃತ್ತ ಧರ್ಮಾಧ್ಯಕ್ಷ ಪರಮಪೂಜ್ಯ ಅಲೋಶಿಯಸ್ ಪೌಲ್ ಡಿಸೋಜಾ ಅವರು ನೆರವೇರಿಸಿದರು. ಸಾವಿರಾರು ಭಕ್ತರು ತಮ್ಮ ಪ್ರಿಯ ಸಂತನ ಆಶೀರ್ವಾದ ಪಡೆಯಲು ಮತ್ತು ಪಡೆದ ಅನೇಕ ಕೃಪೆಗಳಿಗಾಗಿ ಧನ್ಯವಾದ ಸಲ್ಲಿಸಲು ಬಸಿಲಿಕಾಕ್ಕೆ ಭೇಟಿ ನೀಡಿದರು.
ಇತರ ಮಹೋತ್ಸವ ಬಲಿಪೂಜೆ ವಂ. ರಾಜೇಶ್ ರೊಸಾರಿಯೊ (ಜೆಪ್ಪು ಗುರುಮಠದ ರೆಕ್ಟರ್), ವಂ. ಡ್ಯಾನ್ಸಿ ಮಾರ್ಟಿಸ್, ಕಪುಚಿನ್ ಸಭೆ (ಬಸ್ರೂರು ಸೆಂಟ್ರಲ್ ಶಾಲೆಯ ಪ್ರಾಂಶುಪಾಲ), ವಂ. ಫ್ರಾಂಕ್ಲಿನ್ ಡಿ’ಸೋಜಾ


