×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಜನರ ಮುಂದೆ ದರ್ಪ ಅಹಂಕಾರ ತೋರ್ಪಡಿಸಿದವರು ಶಾಶ್ವತವಾಗಿ ಅಧಿಕಾರ ಉಳಿದ ಉದಾಹರಣೆಗಳಿಲ್ಲ – ಉದಯ ಶೆಟ್ಟಿ

ಕಾರ್ಕಳ: ಜನಪರ ಆಡಳಿತ ಮತ್ತು ಪಂಚ ಗ್ಯಾರಂಟಿ ಯೋಜನೆಯ ಮೂಲಕ ಜನಮನ ಗೆದ್ದ ಕಾಂಗ್ರೆಸ್ ಸರಕಾರ ಹಾಗೂ ಯಾವುದೇ ಅಧಿಕಾರದ ಆಸೆ ಇಲ್ಲದೆ ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನು ತಲುಪಬೇಕು ಎಂಬ ಉದ್ದೇಶದಿಂದ ಕಾರ್ಕಳದ ಅಭಿವೃದ್ಧಿಯಲ್ಲಿ ತೊಡಿಸಿಕೊಂಡ ನನ್ನ ಜನಪ್ರಿಯತೆ ಯನ್ನು ಸಹಿಸಲಾಗದ ಅಧಿಕಾರ ದರ್ಪದಿಂದ ಮೆರೆಯುವ ಸುನಿಲ್ ಕುಮಾರ್ ತಂಡ ಅಪಪ್ರಚಾರದಲ್ಲಿ ತೊಡಗಿಸಿಕೊಂಡಿದೆ. ಕೆಲವೊಂದು ರಸ್ತೆ ಸರಿದಂತೆ ವಿವಿಧ ಅಭಿವೃದ್ಧಿ ವಿಚಾರದಲ್ಲಿ ಸಂಬಂಧಪಟ್ಟ ಸಚಿವರಲ್ಲಿ ಮಾತನಾಡಿ ಅನುದಾನ ಬಿಡುಗಡೆ ಮಾಡುವಲ್ಲಿ ಪ್ರಯತ್ನಿಸುತ್ತಿರುವಾಗ ಇದೇ ಸುನಿಲ್ ಕುಮಾರ್ ಅಡ್ಡಗಾಲು ಹಾಕಿತ್ತಿರುವುದು ಕಾರ್ಕಳದ ಅಭಿವೃದ್ಧಿಗೆ ಇವರ ಕೊಡುಗೆಯೇ. ತನ್ನಿಂದಲೇ ತಾನೇ ಮಾಡಿದ್ದೇನೆ ಎಂಬ ದುರಂಕಾರದ ವ್ಯಕ್ತಿ ಜನನಾಯಕನೇ. ಯಾವುದೇ ಅಧಿಕಾರ ಆಸೆಯಿಂದ ಬಂದಿಲ್ಲ ಜನರೊಂದಿಗೆ ಬೆರೆತು ಜನರ ಸೇವೆಗಾಗಿ ಕೆಲಸ ಮಾಡುತ್ತಿರುವುದು ಇವರಿಗೆ ಸಹಿಸಲಾಗುತ್ತಿಲ್ಲ.

ಅಲಂಕಾರ, ಅಹಂಕಾರ, ಭ್ರಷ್ಟಾಚಾರವನ್ನು ತನ್ನ ಮನೆಯ ದೇವರು ಎಂದು ತಿಳಿದು ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವ ಜನರ ಭಾವನೆಗಳೊಂದಿಗೆ ಚೆಲ್ಲಾಟ ಆಡುವ ಸುನಿಲ್ ಕುಮಾರ್ ನೇರವಾಗಿ ಎದುರಿಸಲಾಗದೆ ತನ್ನ ಚೇಲಗಳಿಗೆ ಚಿಲ್ಲರೆ ಕಾಸು ನೀಡಿ ಅವರಿಂದ ಬಾಯಿಗೆ ಬಂದಂತೆ ಮಾತನಾಡಿಸುವ ಸುನಿಲ್ ಕುಮಾರ್ ಅವರ ಚಿಲ್ಲರೆ ಬುದ್ಧಿ ಎಲ್ಲರಿಗೂ ಗೊತ್ತಾಗಿದೆ. 21 ವರ್ಷಗಳಿಂದ ಸುನಿಲ್ ಕುಮಾರ್ ಅವರು ಕಾರ್ಕಳದ ಅಭಿವೃದ್ಧಿಗೆ ಕೊಟ್ಟ ಕೊಡುಗೆ ಆದರೂ ಏನು. ಕೇವಲ ಹಣ ಮತ್ತು ಅಧಿಕಾರ, ಭ್ರಷ್ಟಾಚಾರ ಇವರ ಬಂಡವಾಳ.

ಮುನಿಯಾಲು ಪಡುಕುಡೂರು ರಸ್ತೆ ಸುಮಾರು 20 ವರ್ಷಗಳಿಂದ ದುರಸ್ತಿ ಕಾಣದೆ ಸಂಪೂರ್ಣ ಹದಗೆಟ್ಟು ಜನ ಸಂಚಾರ ಹಾಗೂ ವಾಹನ ಸಂಚಾರಕ್ಕೆ ದುಸ್ತರವಾಗಿತ್ತು. ಶಾಲಾ ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಕ್ಕೆ ತೆರಳುವ ಜನರು, ಮಹಿಳೆಯರು ಈ ರಸ್ತೆಯಲ್ಲಿ ದಿನ ನಿತ್ಯ ಸಂಚರಿಸುತ್ತಿದ್ದು ಕೆಟ್ಟದಾದ ರಸ್ತೆಯಿಂದ ನಿತ್ಯ ಬವಣೆ ಪಡುವಂತಾಗಿದೆ. ಈ ಬಗ್ಗೆ ಸ್ಥಳೀಯ ಶಾಸಕರಿಗೆ, ಗ್ರಾಮ ಪಂಚಾಯತ್ ಆಡಳಿತಕ್ಕೆ ಸಾರ್ವಜನಿಕರು ಹಲವಾರು ಬಾರಿ ಮನವಿ ಮಾಡಿದರೂ ಯಾವುದೇ ಉಪಯೋಗವಿಲ್ಲದ ಹಿನ್ನೆಲೆಯಲ್ಲಿ ರಸ್ತೆ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ ಒದಗಿಸುವಲ್ಲಿ ಲೋಕೋಪಯೋಗಿ ಇಲಾಖೆಯ ಸಚಿವರಾದ ಸನ್ಮಾನ್ಯ ಸತೀಶ್ ಜಾರಕಿಹೊಳಿ ಅವರಿಗೆ ಸ್ವತಃ ನಾನೇ ದುಂಬಾಲು ಬಿದ್ದು ಅನುದಾನವನ್ನು ಮಂಜೂರುಗೊಳಿಸಲು ಸಾಕಷ್ಟು ಪರಿಶ್ರಮಪಟ್ಟಿದ್ದೇನೆ. ಅನುದಾನ ಮಂಜೂರಾದ ಕಾರಣ ಇದರ ಶ್ರೇಯಸ್ಸನ್ನು ಉದಯ ಶೆಟ್ಟಿ ಮುನಿಯಾಲು ಪಡೆದುಕೊಳ್ಳಬಾರದು ಎನ್ನುವ ಮತ್ಸರದಿಂದ ಬಿಜೆಪಿಯವರು ನನ್ನ ವಿರುದ್ದ ರಸ್ತೆ ಅಗೆದು ಹಾಳುಗೆಡಹಿದ ಸುಳ್ಳು ಅಪವಾದವನ್ನು ಮಾಡುತ್ತಿದ್ದಾರೆ.

ಪೇಜಾವರ ಸ್ವಾಮಿಗಳ ವಿನಂತಿಯ ಮೇರೆಗೆ ಕಣ್ಂಕಿಲ ಬ್ರಹ್ಮಲಿಂಗೇಶ್ವರ ದೇವಸ್ಥಾನ ತನಕ ರಸ್ತೆಗೆ ಕಾಂಕ್ರೀಟೀಕರಣ, ವೀರೇಂದ್ರ ಹೆಗಡೆಯವರ ಇಂತಿ ಮೇರೆಗೆ ಪರ್ಕಳ ಪರಿಕ ದೇವಸ್ಥಾನ ರಸ್ತೆ ಅಭಿವೃದ್ಧಿ ಹತ್ತು ಹಲವರು ರಸ್ತೆ ಅಭಿವೃದ್ಧಿಗಳು ಸರಕಾರದ ಯಾವುದೇ ಅನುದಾನವ ಸಿಗುವ ಮೊದಲು ನನ್ನ ಹಣದಿಂದ ನಿರ್ಮಿಸಿ ಕೊಟ್ಟಿದ್ದೇನೆ. ಆವಾಗ ಯಾಕೆ ದೂರು ನೀಡಿಲ್ಲ.

ಉದಯ ಶೆಟ್ಟಿ ಮುನಿಯಾಲು ಸಾವಿರಾರು ಕಿಲೋಮೀಟರ್ ರಸ್ತೆ ನಿರ್ಮಾಣ ಮಾಡಿದವರೇ ಹೊರತು, ಯಾವತ್ತೂ ರಸ್ತೆಯನ್ನು ಕೆಡವಿದವರಲ್ಲ, ಕೆಡಹುವ ಸಂಸ್ಕೃತಿ ಏನಿದ್ದರೂ ಅದು ಬಿಜೆಪಿಯ ಸಂಸ್ಕೃತಿ ಎನ್ನುವುದು ಇಡೀ ದೇಶಕ್ಕೆ ತಿಳಿದಿದೆ.

21 ವರ್ಷಗಳಿಂದ ಕಾರ್ಕಳದಲ್ಲಿ ಶಾಸಕರಾಗಿರುವವರಿಗೆ ಇಲ್ಲಿ ಬೇರೆ ನಾಯಕರು ಬೆಳೆಯುವುದನ್ನು ನೋಡಲಾಗುತ್ತಿಲ್ಲ. ಸಣ್ಣಪುಟ್ಟ ವಿಚಾರಕ್ಕೂ‌ ದ್ವೇಷ ರಾಜಕೀಯವನ್ನು ಮಾಡಿ ಸೋಶಿಯಲ್ ಮೀಡಿಯಾ ಮೂಲಕ ತೇಜೋವಧೆಗೆ ಇಳಿದಿದ್ದಾರೆ.

ಪರಶುರಾಮ ನಕಲಿ ಪ್ರತಿಮೆ ಹಗರಣ, ಸರ್ಕಾರದ ಸಿಮೆಂಟನ್ನು ಖಾಸಗಿ ಕಟ್ಟಡಕ್ಕೆ ಬಳಸಿಕೊಂಡ ಸಿಮೆಂಟ್ ಹಗರಣ, ಎಣ್ಣೆಹೊಳೆ ಅಣೆಕಟ್ಟಿನಲ್ಲಿ ಅವ್ಯವಹಾರದ ಹಗರಣ, ಇಲಾಖೆಗಳಿಂದ ತಿಂಗಳಿಗೆ ಮಾಮೂಲಿ ವಸೂಲಿ ಮುಂತಾದ ಹಗರಣಗಳಿಂದ ಹೆಸರು ಕೆಡಿಸಿಕೊಂಡಿರುವ ಸುನೀಲ್ ಕುಮಾರ್ ಇಂದು ತನ್ನ ಹೆಸರು ಉಳಿಸಿಕೊಳ್ಳಲು ಉದಯ ಶೆಟ್ಟಿ ಮುನಿಯಾಲು ಹೆಸರನ್ನು ಹಾಳುಗೆಡಹಲು ಪ್ರಯತ್ನಿಸುತ್ತಿದ್ದಾರೆ.

ಯೂಟ್ಯೂಬ್ ಚಾನೆಲ್ ಒಂದಕ್ಕೆ ಹಣ ಸಂದಾಯ ಮಾಡಿ ಪಡುಕುಡೂರು ರಸ್ತೆಯ ವಿಚಾರವಾಗಿ ನನ್ನ ವಿರುದ್ದ ವರದಿ ಮಾಡಿಸಿದ್ದಾರೆ. ಕಾರ್ಕಳದಲ್ಲಿ ಸುನೀಲ್ ಕುಮಾರ್ ಅನಾಚಾರಗಳು ದಿನದಿಂದ ದಿನಕ್ಕೆ ಮಿತಿ ಮೀರುತ್ತಿದ್ದು ಮುಂಬರುವ ದಿನಗಳಲ್ಲಿ ಜನರೇ ಇದಕ್ಕೆ ಕಡಿವಾಣ ಹಾಕಲಿದ್ದಾರೆ.

Leave a Reply

Your email address will not be published. Required fields are marked *