ಇತಿಹಾಸ ಪ್ರಸಿದ್ಧ ಕಾಪು ತಾಲೂಕಿನ ಬೆಳಪು ಜಾರಂದಾಯ ಕೆರೆ ಪುನರಪಿ ಸಾರ್ವಜನಿಕ ಸೇವೆಗೆ ಸಿದ್ಧವಾಗಿದೆ. ಈ ಕೆರೆಯಲ್ಲಿ ಬೋಟಿಂಗ್ ಕ್ಲಬ್ ಮೂಲಕ ಸಾರ್ವಜನಿಕ ರಿಗೆ ಬೋಟಿಂಗ್ ಮಾಡುವ ಅವಕಾಶ ಕಲ್ಪಿಸಲಾಗಿದೆ.
ಐದು ವರ್ಷಗಳ ಹಿಂದೆ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಿದ ಜಾರಂದಾಯ ಕೆರೆ ಕರ್ನಾಟಕ ರಾಜ್ಯೋತ್ಸವ ದಿನದಲ್ಲಿ ಮತ್ತೆ ಪುನಃ ಪ್ರಾರಂಭಿಸಲಾಯಿತು ಎಂದು ಬೆಳಪು ಗ್ರಾಮದ ಸರ್ವತೋಮುಖ ಅಭಿವೃದ್ಧಿ ಹರಿಕಾರ ದೇವಿಪ್ರಸಾದ್ ಶೆಟ್ಟಿ ಹೇಳಿದರು. ಕೆರೆಯ ಸಮಗ್ರ ಅಭಿವೃದ್ಧಿ ಮತ್ತು ಬೋಟಿಂಗ್ ವ್ಯವಸ್ಥೆಯ ನ್ನು ಸ್ಥಳೀಯ ಡಾ.ನಝೀರ್ ರವರ ಸುಪರ್ದಿಗೆ ಕೊಟ್ಟಿದ್ದೇವೆ. ಇಲ್ಲಿ ಸ್ಥಳೀಯ ನಾಗರಿಕರಿಗೆ ಉತ್ತಮ ಅವಕಾಶವಿದೆ. ಎಂದು ತಿಳಿಸಿದರು ಈ ಸಂದರ್ಭದಲ್ಲಿ ಶೇಖಬ್ಬ ಉಚ್ಚಿಲ ಜಹೀರ್ ಬೆಳಪು ಮುಂತಾದವರು ಉಪಸ್ಥಿತರಿದ್ದರು

