×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಕಾರ್ಕಳ ಪವಾಡ ಪುರುಷ ಸಂತ ಲಾರೆನ್ಸ್ ಬಸಿಲಿಕಾ, ಅತ್ತೂರ್‌ನಲ್ಲಿ ಹರಿಯುತಿರುವ ಜನ ಸಾಗರ

ಕಾರ್ಕಳ ಅತ್ತೂರು ಸಂತ ಲಾರೆನ್ಸ್ ಬಸಿಲಿಕಾದ ಮಹೋತ್ಸವದ ನಾಲ್ಕನೇ ದಿನವಾದ ಬುದವಾರದಂದು ಮಹೋತ್ಸವದ ಮುಖ್ಯ
ದಿನವಾದ್ದರಿಂದ ಬೆಳಗ್ಗೆಯಿಂದ ತಡ ರಾತ್ರಿ ತನಕ ಭಕ್ತರು ಭಾರೀ ಸಂಖ್ಯೆಯಲ್ಲಿ ಪುಣ್ಯಕ್ಷೇತ ್ರಕ್ಕೆ ಹರಿದುಬಂದರು. ಸಂತ ಲಾರೆನ್ಸ್ ರವರ
ಅತ್ಯದ್ಭುತ ಶಕ್ತಿಯುತ ಮಧ್ಯಸ್ಥಿಕೆಯಿಂದ ದೇವರಿಗೆ ತಮ್ಮ ಬೇಡಿಕೆಗಳನ್ನು ಸಮರ್ಪಿಸಿದರು. ಭಕ್ತರ ಭಾರೀ ಸಂಖ್ಯೆಯ ಕಾರಣ ವಾಹನಗಳನ್ನು
ದೂರದಲ್ಲಿ ನಿಲ್ಲಿಸಲಾಗಿದ್ದು, ಜನರು ಸುಮಾರು ಒಂದು ಕಿಲೋಮೀಟರ್ ನಡೆದುಕೊಂಡು ಸ್ಥಳಕ್ಕೆ ತಲುಪಿದರು.

ಸಾಂಪ್ರದಾಯಿಕವಾಗಿ, ಭಕ್ತರು ಬಲಿಪೂಜೆಗೆ ಹಾಜರಾಗುವ ಮೊದಲು ಪಾಪನಿವೇದನಾ ಸಂಸ್ಕಾರವನ್ನು ಸ್ವೀಕರಿಸಲು ಸಾಲಿನಲ್ಲಿ ನಿಂತರು.
ದಿನಪೂರ್ತಿ ದೀರ್ಘ ಸಾಲುಗಳ ಕಾಣಿಸಿಕೊಂಡವು. ಪಡೆದ ಕೃಪೆಗಳಿಗಾಗಿ ಕೃತಜ್ಞತೆಯ ಸಂಕೇತವಾಗಿ ಭಕ್ತರು ಬಲಿಪೂಜೆ ಅರ್ಪಣೆಗಳನ್ನು
ಸಮರ್ಪಿಸಿದರು. ಸ್ಥಳದಲ್ಲಿದ್ದ ಯಾಜಕರು ರೋಗಿಗಳು ಮತ್ತು ಮಕ್ಕಳ ಮೇಲೆ ತಮ್ಮ ಹಸ ್ತವನ್ನು ಚಾಚಿ ಆಶೀರ್ವದಿಸಿ ಅವರ ಆರೋಗ್ಯ
ಮತ್ತು ಸುಭೀಕ್ಷೆಗಾಗಿ ಪ್ರಾರ್ಥಿಸಿದರು.

ಮಹೋತ್ಸವದ ಎರಡು ಪ್ರಮುಖ ಬಲಿಪೂಜೆಗಳು ನಡೆದವು. ಬೆಳಿಗ್ಗೆಯ ಬಲಿಪೂಜೆಯನ್ನು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ
ಪರಮಪೂಜ್ಯ ಧರ್ಮಾಧ್ಯಕ್ಷ ಡಾ. ಜೆರಾಲ್ಡ್ ಐಸಾಕ್ ಲೋಬೋ ಅವರು ನೆರವೇರಿಸಿದರು. ಸಂಜೆಯ ಬಲಿಪೂಜೆಯನ್ನು ಅಜ್ಮಿರ್‌ನ ನೂತನ
ಧರ್ಮಾಧ್ಯಕ್ಷರಾದ ಪರಮಪೂಜ್ಯ ಧರ್ಮಾಧ್ಯಕ್ಷ ಡಾ. ಜಾನ್ ಕಾರ್ವಾಲೋ ಅವರು ನೆರವೇರಿಸಿದರು. ತಮ್ಮ ಉಪದೇಶಗಳಲ್ಲಿ “ನಾನು
ನಿಮ್ಮನ್ನು ಪ್ರೀತಿಸಿದ್ದೇನೆ” ಎಂಬ ಮಹೋತ್ಸವದ ಸಂದೇಶವನ್ನು ವಿವರಿಸಿ, ಕ್ರಿಸ್ತನ ನಿರ್ವ್ಯಾಜ ಪ್ರೀತಿಯನ್ನು ಅನುಭವಿಸಿ, ಅದನ್ನು
ದೀನದಲಿತರಾದ ಸಹೋದರ ಸಹೋದರಿಯರೊಂದಿಗೆ ಹಂಚಿಕೊಳ್ಳುವ ಮೂಲಕ ವಿಸ್ತರಿಸುವ ಅಗತ್ಯವಿದೆ ಎಂದು ಒತ್ತಿಹೇಳಿದರು.

ಇತರ ಬಲಿಪೂಜೆಗಳನ್ನು ವಿವಿಧ ಯಾಜಕರು ನೆರವೇರಿಸಿ ರೋಗಿಗಳ ಮೇಲೆ ಪ್ರಾರ್ಥಿಸಿದರು: ವಂ. ಸ್ಟೀವನ್ ಫೆ
ರ್ನಾಂಡಿಸ್ (ಐಸಿವೈಎಂ ನಿರ್ದೇಶಕರು), ವಂ. ಅನಿಲ್ ಲೋಬೋ (ಸುಂಡೇಕೆರೆ, ಚಿಕ್ಕಮಗಳೂರು), ವಂ. ಕ್ಲಾನಿ ಡಿಸೋಜಾ (ಗ್ಲಾಡ್ಸಮ್ ಹೋಮ್, ಮಂಗಳೂರು),ವಂ. ಸುನಿಲ್ ಪಿಂಟೊ (ಕಡಬ ಶಾಲೆಯ ಪ್ರಾಂಶುಪಾಲರು), ವಂ. ಪ್ರದೀಪ್ ಕಾರ್ಡೋಜಾ (ಮಿಲಾಗ್ರಿಸ್ ಕ್ಯಾಥೆಡ್ರಲ್ ಸಹಾಯಕ,ಧರ್ಮಗುರು), ವಂ. ರೋಹಿತ್ ಡಿಕೋಸ್ಟಾ (ಮಂಗಳ ಜ್ಯೋತಿ ನಿರ್ದೇಶಕರು, ಮಂಗಳೂರು), ಮತ್ತು ವಂ. ರೋಹ
ನ್ ಡಯಾಸ್, cssr ಸಭೆ (ಅಲಂಗಾರ್, ಮೂಡುಬಿದ್ರೆ).

ಧರ್ಮಾಧ್ಯಕ್ಷ ಜೆರಾಲ್ಡ್ ಐಸಾಕ್ ಲೋಬೊರವರು ಮಹೋತ್ಸವದ ಯಶಸ್ವಿ ಆಚರಣೆಗೆ ಸೂಕ್ತ ವ್ಯವಸ್ಥೆ ಮಾಡಿದ ಅತ್ತೂರು ಪುಣ್ಯಕ್ಷೇತ್ರದ
ಧರ್ಮಗುರುಗಳು, ಸಹಾಯಕ ಯಾಜಕರು ಮತ್ತು ಎಲ್ಲ ¨s Àಕ್ತರಿಗೆ ಹೃದಯಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದರು. ಬಸಿಲಿಕಾದ ¨s Àವಿಷ್ಯ
ಯೋಜನೆಗಳು ಯಶಸ್ವಿಯಾಗಿ ಪೂರ್ಣಗೊಳ್ಳಲು ಭಕ್ತರ ಪ್ರಾರ್ಥನೆಗಳನ್ನು ವಿನಂತಿಸಿದರು. ಕುಂದಾಪುರ ವಿಭಾಗದ ಸಹಾಯಕ
ಆಯುಕ ್ತರಾದ ಶ್ರೀಮತಿ ರಶ್ಮಿ ಅವರು ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿ ಉತ್ಸವದ ಶುಭಾಶಯಗಳನ್ನು ಕೋರಿದರು.

ನಾಳೆ ಸಂಪ್ರದಾಯದAತೆ “ಕೃತಜ್ಞತೆಯ ತಾಯಿ”ಯಾದ ಮಾತೆ ಮೇರಿಯವರ ಗೌರವಾರ್ಥ ಬಲಿಪೂಜೆ ಅರ್ಪಿಸಲಾಗುವುದು. ಸಂಜೆ ೬.೦೦
ಗಂಟೆಯ ಬಲಿಪೂಜೆಯೊಂದಿಗೆ ಮಹೋತ್ಸವದ ಕಾರ್ಯಕ್ರಮಗಳು ಅಂತ್ಯಗೊಳ್ಳಲಿವೆ. ಆ ಬಳಿಕ “ಜಗತ್ ಜ್ಯೋತಿ” ಎಂಬ ಯಕ್ಷಗಾನ
ಪ್ರದರ್ಶನ ನಡೆಯಲಿದೆ.

Leave a Reply

Your email address will not be published. Required fields are marked *