Site icon ಉಡುಪಿ ನ್ಯೂಸ್ ಪ್ಲಸ್

ಮುಸಲ್ಮಾನರ ವಿರುದ್ದ ಅವಹೇಳನಕಾರಿ ಹೇಳಿಕೆ ಶಾಸಕ ಬಸವನಗೌಡ ಪಾಟೀಲ್ ಯತ್ನಾಲ್,ಸಿಟಿ ರವಿ,ಮತ್ತು ಚಕ್ರವರ್ತಿ ಸೂಳಿಬೆಲೆ ವಿರುದ್ದ ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ದಿಂದ ದೂರು ದಾಖಲು

,ಇತ್ತೀಚೆಗೆ ವಿಜಾಪುರದಲ್ಲಿ ನಡೆದ ಸಭೆಯೊಂದರಲ್ಲಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಲ್,ಸಿಟಿ ರವಿ,ಮತ್ತು ಚಕ್ರವರ್ತಿ ಸೂಳಿಬೆಲೆ,ಇವರು ಮುಸಲ್ಮಾನರ ವಿರುದ್ದ ಅವಹೇಳನಕಾರಿಯಾಗಿ ಅತ್ಯಂತ ಕೀಳುಮಟ್ಟದ ಪದಗಳನ್ನು ಮಟ್ಟದ ಉಚ್ಚರಿಸಿ ವಕ್ಫ್ ಬಗ್ಗೆಯೂ ಸಮಾಜದಲ್ಲಿ ಅಶಾಂತಿ ಉಂಟುಮಾಡುವ ಕೆಲಸಗಳನ್ನು ಮಾಜಿದ್ದರು ಅದರ ವಿರುದ್ದ ವಾಗಿ ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ದ ಅಧ್ಯಕ್ಷರಾದ ಶರ್ಫುದ್ದೀನ್ ಶೇಖ್ ಇವರ ನೇತೃತ್ವದಲ್ಲಿ ಉಡುಪಿಯ ಟೌನ್ ಪೋಲೀಸ್ ಠಾಣೆಯ ವೃತ್ತ ನಿರೀಕ್ಷರಿಗೆ ದೂರು ನೀಡಿ ಕೇಸ್ ದಾಖಲಿಸಲಾಯಿತು.ಈ ಸಂಧರ್ಭದಲ್ಲಿ ಫಾದರ್ ವಿಲಿಯಮ್ ಮಾರ್ಟಿಸ್,ಪಕ್ಷದ ಮುಖಂಡರಾದ ಹಸನ್ ಮನಿಪುರ,ಡಾ: ಮಹಮ್ಮದ್ ಫಾರೂಕ್ ಚಂದ್ರನಗರ, ವಹೀದ್ ಶೇಖ್,ಸಯ್ಯದ್ ಯಾಸೀನ್ ಹೆಮ್ನಾಡಿ,ಹಮೀದ್ ಯೂಸುಫ್,ಸದಾನಂದ ಕಾಂಚನ್,ವಿಲ್ಸನ್ ಮಾರ್ಟಿಸ್,,ಹಸನಬ್ಬ ಶೇಖ್,ಹಮ್ಮದ್ ಉಡುಪಿ,ಇಬ್ರಾಹಿಂ ಸನಾ,ರೀನಾ ಡಿಸೋಜ,ರೋಶನ್ ಡಿಸೋಜ,ಪೀಟರ್ ಪ್ರತಾಪ್ ಲೂಯಿಲ್,ಶಬ್ಬೀರ್ ಬೈಂದೂರ್,ಪ್ರೀತಿ ಸಾಲಿನ್ಸ್,ಅಬ್ಬು ಪರ್ಕಳ, ಆರೀಫ್ ಕಲ್ಲೆಟ್ಟೆ ಕಾರ್ಕಳ,ಲಿಯಾಕತ್ ಪಡುಬಿದ್ರಿ,ಶುಕೂರ್ ಸಾಹೇಬ್,ಅಬ್ದುಲ್ ರಝಾಕ್ ಮುಂತಾದವರು ಉಪಸ್ಥಿತರಿದ್ದರು.

Exit mobile version