ಮುದ್ರಾಡಿಯಲ್ಲಿ ಮೇಘ ಸ್ಫೋಟದಿಂದ ಆತಂಕಕ್ಕೊಳಗಾದ ಮನೆಗಳಿಗೆ ಕಾಂಗ್ರೆಸ್ ನಾಯಕರಾದ ಮುನಿಯಾಲು ಉದಯ ಶೆಟ್ಟಿಯವರು ಭೇಟಿ ನೀಡಿದ್ದಾರೆ. ಮುದ್ರಾಡಿಯಲ್ಲಿ ಹಲವಾರು ಎಕರೆ ಕೃಷಿ ಪ್ರದೇಶವು ಮೇಘ ಸ್ಫೋಟದಿಂದಾಗಿ ಹಾನಿಗೊಳಗಾಗಿತ್ತು..ಓರ್ವ ವೃದ್ದೆ ಕೂಡ ಮೃತ ಪಟ್ಟಿದ್ದರು. ನೀರಿನ ಪ್ರವಾಹದಿಂದ ಸಮಸ್ಯೆಗೆ ಒಳಗಾದ ಎಲ್ಲಾ ಮನೆಗಳಿಗೆ ಭೇಟಿ ನೀಡಿದ ಅವರು ಹಾನಿಯಾದ ಕೃಷಿ ಗೆ ಸರಕಾರದಿಂದ ನೀಡುವ ಪರಿಹಾರ ಮೊತ್ತವನ್ನು ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈ ಗೊಳ್ಳುವುದಾಗಿ ತಿಳಿಸಿದರು. ಪ್ರವಾಹದ ಪಾಲಾಗಿ ಜೀವ ಕಳೆದುಕೊಂಡ ಚಂದು ಗೌಡ್ತಿ ಮನೆಗೆ ಭೇಟಿ ನೀಡಿದ ಅವರು ಮನೆಯವರಿಗೆ ಸಾಂತ್ವನ ಹೇಳಿದರು
ಮುದ್ರಾಡಿಯಲ್ಲಿ ಮೇಘ ಸ್ಫೋಟದಿಂದ ಆತಂಕಕ್ಕೊಳಗಾದ ಮನೆಗಳಿಗೆ ಕಾಂಗ್ರೆಸ್ ನಾಯಕರಾದ ಮುನಿಯಾಲು ಉದಯ ಶೆಟ್ಟಿಯವರು ಭೇಟಿ

