Site icon ಉಡುಪಿ ನ್ಯೂಸ್ ಪ್ಲಸ್

ಅನದಾನ ಬಂದಿಲ್ಲ ಅಂತಾ ಮೊಸಳೆ ಕಣ್ಣೀರು ಹಾಕುವುದು ಬಿಟ್ಟು ,ಅಭಿವೃದ್ಧಿ ಪಟ್ಟಿಯನ್ನು ಸರ್ಕಾರದ ಮುಂದಿಟ್ಟು ಅನುದಾನ ತಂದು ಗಂಡಸುತನ ಪ್ರದರ್ಶಿಸಿ.ಶಾಸಕ ಯಶ್ ಪಾಲ್ ಸುವರ್ಣರಿಗೆ ಪ್ರಸಾದ್ ರಾಜ್ ಕಾಂಚನ್ ತಿರುಗೇಟು.

ಅನುದಾನ ಬಿಡುಗಡೆಯಾಗಿಲ್ಲ ಎಂದು ಸುಳ್ಳು ಹೇಳಿಕೆಗಳನ್ನು ಹೇಳುತ್ತಾ, ಗಂಡಸುತನ ಪ್ರಶ್ನೆ ಮಾಡುವ ಹೇಳಿಕೆ ಒಬ್ಬ ಶಾಸಕನಾಗಿ ಯಶ್ ಪಾಲ್ ಸುವರ್ಣರಿಗೆ ಶೋಭೆ ತರುವುದಿಲ್ಲ. ಉಡುಪಿಯ ಜನತೆ ನಿಮ್ಮನ್ನ ಶಾಸಕನಾಗಿ ಅಯ್ಕೆ ಮಾಡಿದೆ.ಜನರ ಸಮಸ್ಯೆಗಳಿಗೆ ಧ್ವನಿಯಾಗುವುದರ ಜೊತೆಗೆ ಅಭಿವೃದ್ದಿಗಾಗಿ ಅನುದಾನಗಳನ್ನು ತರುವ ಕೆಲಸ ಶಾಸಕನದ್ದು,ಅನುದಾನ ತರುವಲ್ಲಿ ವಿಫಲರಾಗಿರುವ ನಿಮ್ಮ ಗಂಡಸುತನ ಎಲ್ಲಿ ಹೋಗಿದೆ ಎಂದು ಕಾಂಚನ್ ಪ್ರಶ್ನಿಸಿದ್ದಾರೆ. ಕೇಂದ್ರದಲ್ಲಿ ನಿಮ್ಮದೆ ಬಿಜೆಪಿ ಸರ್ಕಾರ ಇದೆ ಸಾಕಷ್ಟು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಇಂದ್ರಾಳಿ ರಸ್ತೆಗೆ ಒಮ್ಮೆ ಮುಕ್ತಿ ನೀಡಿ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡಿ. ಸಂತೆಕಟ್ಟೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆಮೆ ವೇಗದಲ್ಲಿ ನಡೆಯುತ್ತಿದೆ, ಅದಕ್ಕೆ ವೇಗ ಕೊಡುವ ಕೆಲಸ ಮಾಡಿ. ಅದು ಬಿಟ್ಟು ಸದಾ ಶಾಂತಿಯಿಂದ ಕೂಡಿದ ಉಡುಪಿಯಂತಹ ಕ್ಷೇತ್ರದಲ್ಲಿ ಶಾಂತಿ ಭಂಗದಂತಹ ಹೇಳಿಕೆಗಳನ್ನು ನೀಡುವುದು.ಮುಖ್ಯಮಂತ್ರಿಗಳು ,ಉಸ್ತುವಾರಿ ಸಚಿವರ ಬಗ್ಗೆ ಅಗೌರದ ಹೇಳಿಕೆಗಳನ್ನು ಬಿಟ್ಟು,ಕ್ಷೇತ್ರದಲ್ಲಿ ಸೌಹರ್ದತೆ ಕಾಪಾಡುವ ಕೆಲಸ ಮಾಡುವುದರ ಜೊತೆ ಅನುದಾನ ತರುವ ಕೆಲಸವನ್ನು ಜವಬ್ದಾರಿಯುತವಾಗಿ ಮಾಡಿ ಎಂದು ಶಾಸಕರಿಗೆ ಕಿವಿ ಮಾತು ಹೇಳಿದ್ದಾರೆ.

Exit mobile version