Site icon ಉಡುಪಿ ನ್ಯೂಸ್ ಪ್ಲಸ್

27 ರಂದು ರಾಹುಲ್ ಗಾಂಧಿ ಉಚ್ಛಿಲಕ್ಕೆ ಭೇಟಿ ಎಸ್ಪಿಯಿಂದ ಸ್ಥಳ ಪರಿಶೀಲನೆ..

27 ರಂದು ರಾಹುಲ್ ಗಾಂಧಿ ಉಚ್ಛಿಲಕ್ಕೆ: ಮೀನುಗಾರರ ಸಮಾವೇಶ, ಮೀನುಗಾರರೊಂದಿಗೆ ಸಂವಾದ. ಎಸ್ ಪಿ ಪರಿಶೀಲನೆ..
ಉಡುಪಿ: ಏಪ್ರಿಲ್ 27 ,ರಂದು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಉಡುಪಿಯ ಉಚ್ಛಿಲಕ್ಕೆ ಬರಲಿದ್ದು ಮೀನುಗಾರರ ಸಮಾವೇಶ ಅವರ ಜೊತೆಗೆ ಸಂವಾದ ಕಾರ್ಯಕ್ರಮ ‌ನಡೆಯಲಿದೆ. ಸಭೆ ಸಂವಾದ ಕಾರ್ಯಕ್ರಮ ಉಚ್ಛಿಲ‌ ಮಹಾಲಕ್ಷ್ಮೀ ದೇವಸ್ಥಾನದ ಶಾಲಿನಿ‌ ಜಿ ಶಂಕರ್ ಸಭಾಂಗಣದಲ್ಲಿ‌‌ ನಡೆಯಲಿದೆ. ಕಾಪು‌ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ನೇತ್ರತ್ವದಲ್ಲಿ ಸಭೆ ಸಂವಾದ ನಡೆಯುವ ಸ್ಥಳವನ್ನು ಎಸ್ ಪಿ ಅಕ್ಷಯ್ ಮಚ್ಛಿಂದ್ರ ತಂಡ ಪರಿಶೀಲನೆ ನಡೆಸಿದರು. ಈ ಸಂದರ್ಭ ಕಾಂಗ್ರೆಸ್ ಮುಖಂಡರಾದ ಅಶೋಕ್‌ಕುಮಾರ್ ಕೊಡವೂರು,ಉಡುಪಿ ಶೇಕ್ ವಹಿದ್ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ, ಅನಿವಾಸಿ ಭಾರತೀಯ ವಿಭಾಗ ಜಿಲ್ಲಾ *ಸಂಚಾಲಕರು .  ಮಂಜುನಾಥ ಸುಣೇಗಾರ್, ಹರೀಶ್ ಕಿಣಿ, ಜಿತೇಂದ್ರ ಪುಟಾರ್ಡೋ, ಅಖಿಲೇಶ್ ಕೋಟ್ಯಾನ್, ಶರ್ಪುದ್ದೀನ್ ಶೇಖ್, ವಿಶ್ವಾಸ್ ಅಮೀನ್, ಸತೀಶ್ ಅಮೀನ್, ರೋಶನ್, ಸಂತೋಷ್ ಪಡುಬಿದ್ರೆ, ಶೇಖರ ಹೆಜ್ಮಾಡಿ, ದೀಪಕ್ ಎರ್ಮಾಳ್ ಉಪಸ್ಥಿತರಿದ್ದರು.

Exit mobile version