Site icon ಉಡುಪಿ ನ್ಯೂಸ್ ಪ್ಲಸ್

ಕಾಲ್ನಡಿಗೆ ಹಜ್ ಯಾತ್ರೆ ಹೊರಟ ಯುವಕನಿಗೆ ಫಾರೂಕ್ ಚಂದ್ರನಗರ ರವರ ಬಟರ್ ಫ್ಲೈ ಗೆಸ್ಟ್ ಹೌಸ್ನಲ್ಲಿ ವಾಸ್ತವ್ಯ ವ್ಯವಸ್ಥೆ

ಕಾಪು ಕಾಲ್ನಡಿಗೆಯಲ್ಲಿ ಪವಿತ್ರ ಹಜ್ ಯಾತ್ರೆ ಕೈಗೊಂಡಿರುವ ಉಪ್ಪಿನಂಗಡಿಯ ಯುವಕ ನೌಶಾದ್ ಬಿ.ಕೆ.ಎಸ್ ನೂತನವಾಗಿ ಪ್ರಾರಂಭವಾದ ಕಾಪು-ಚಂದ್ರನಗರದ ಬಟರ್ ಫ್ಲೈ ಗೆಸ್ಟ್ ಹೌಸ್ ನಲ್ಲಿ ವಿಶ್ರಾಂತಿಗಾಗಿ ಅವರಿಗೆ ಭೋಜನ ಹಾಗೂ ತಂಗುವ ವ್ಯವಸ್ಥೆ ಬಟರ್ ಫ್ಲೈ ಗೆಸ್ಟ್ ಹೌಸ್ ಆಡಳಿತ ನಿರ್ದೇಶಕ ಫಾರೂಕ್ ಚಂದ್ರನಗರ ಮಾಡಿದರು ಈ ಸಂದರ್ಭದಲ್ಲಿ ಅನಿವಾಸಿ ಭಾರತೀಯ ಉದ್ಯಮಿ ಸಮಾಜ ಸೇವಕರಾದ ಮೂಸ ಮಜೂರು ನೌಶಾದ್ ಬಿ.ಕೆ.ಎಸ್ ರವರಿಗೆ ಸನ್ಮಾನಿಸಿ ಗೌರವಿಸಿದರು ಮಾತನಾಡಿದ ಅವರು ಮುಸ್ಲಿಂಮರಿಗೆ ಹಜ್ ಯಾತ್ರೆ ಕಡ್ಡಾಯವಾಗಿದೆ ಆ ಭಾಗ್ಯ ಎಲ್ಲಾ ಜನರಿಗೂ ಸಿಗಲಿ ನೌಶಾದ್ ರವರ ಕಾಲ್ನಡಿಗೆ ಯಾತ್ರೆ ಶುಭವಾಗಲಿ ಎಂದರು
ಈ ಸಂದರ್ಭದಲ್ಲಿ ಉದ್ಯಮಿ ಕೆ. ಉಮ್ಮರಬ್ಬ ಚಂದ್ರನಗರ, ಸಮಾಜ ಸೇವಕ ಶರ್ಫುದ್ದಿನ್ ಶೇಕ್ ಮಜೂರು,ಸಾಹಿತಿ- ಚಿಂತಕ ಅಶ್ರಫ್ ಕರಂದಾಡಿ, ಅಬ್ದುಲ್ ಇಲ್ಯಾಸ್ ಮಜೂರು,ಫೈಸಲ್ ಕಾರಂದಾಡಿ ಸಮದ್ ಮಲ್ಲಾರ್,ಲುಕ್ಮನ್ ಮಜೂರು, ಕಾಪು ಸಾದಿಕ್ ಸಾಹಿಲ್ ಫೇಬ್ರಿಕೇಟರ್ಸ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು

Exit mobile version