
ಕಾಪು ಪೇಟೆಯಲ್ಲಿ ಕಾಪು ಜೆಸಿಐ ಸಂಸ್ಥಯ ರಜತ ಮಹೋತ್ಸವ ಕಾರ್ಯಕ್ರಮವನ್ನು ಉಡುಪಿ ಪುತ್ತಿಗೆ ಮಠಾಧೀಶ ಸುಗುನೆಂದ್ರ ತೀರ್ಥ ಸ್ವಾಮೀಜಿಯವರು ಉದ್ಘಾಟಿಸಿದರು ಈ ಸಂದರ್ಭದಲ್ಲಿ ಮಾತನಾಡಿದ ಗುರ್ಮೆ ಫೌಂಡೇಶನ್ ಅಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ ಜೆಸಿಐ ಇವತ್ತು ಈ ಸಮಾಜದ ಈ ನೀರಿನ ಈ ಊರಿನ ಋಣವನ್ನ ತೀರಿಸುವ ಕೆಲಸ ಮಾಡುತ್ತಿದೆ ಜೀತ ದಿಂದ ಕೂಲಿಗೆ ಕೂಲಿಯಿಂದ ಕೃಷಿ ಬದುಕಿಗೆ ಕೃಷಿ ಬದುಕಿನಿಂದ ಆಧುನಿಕ ಬದುಕಿಗೆ ನಡೆದು ಬಂದ ರೋಚಕ ಇತಿಹಾಸ ಇದೆ ಎಂದರುಇದೇ ಸಂದರ್ಭ ರಜತ ಮಹೋತ್ಸವದ ಪ್ರಯುಕ್ತ 25 ಸಂಘ ಸಂಸ್ಥೆಯ ಅದರ ಪದಾಧಿಕಾರಿಗಳನ್ನು ಗುರುತಿಸಿ ಸನ್ಮಾನಿಸಲಾಯಿತು ವೇದಿಕೆಯಲ್ಲಿ ರಜತ ಮಹೋತ್ಸವ ಸಮಿತಿಯ ಅಧ್ಯಕ್ಷ ದೀಪಕ್ ಕುಮಾರ್ ಎರ್ಮಾಳ್ ಜೆಸಿಐ ಅಧ್ಯಕ್ಷೆ ದೀಕ್ಷ ವಲಯ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ ರಾಕೇಶ್ ಕುಂಜೂರು ಕಾಪು ದಿವಾಕರ್ ಶೆಟ್ಟಿ ಪ್ರಭಾಕರ ಪೂಜಾರಿ ಲೀಲಾಧರ್ ಶೆಟ್ಟಿ ವೈ ಸುಕುಮಾರ್ ಮುಂತಾದವರು ಉಪಸ್ಥಿತರಿದ್ದರು
