Site icon ಉಡುಪಿ ನ್ಯೂಸ್ ಪ್ಲಸ್

ಆಕ್ರಮ ಮರಳು ಸಾಗಾಟ – ಪ್ರಕರಣ ದಾಖಲು

ಕೋಟ: ಕಾರ್ತಿಕೇಯ ಭಟ್‌‌‌‌‌(36), ಕಂದಾಯ ನಿರೀಕ್ಷಕರು, ಬ್ರಹ್ಮಾವರ ಇವರು ಮಧ್ಯಾಹ್ನ 2:15 ಗಂಟೆ ಸಮಯಕ್ಕೆ  ‌‌‌‌ಹೋಟೇಲ್‌‌‌ನಲ್ಲಿ ಊಟ ಮಾಡಿ ಹೊರಬರುವಾಗ ಲಾರಿ ಚಾಲಕ ಫಕೀರಪ್ಪ ಹೊಸಮನಿ ಕುಂದಾಪುರ ಕಡೆಯಿಂದ ಉಡುಪಿಗೆ ಕಡೆ ಚಲಾಯಿಸಿ ಕೊಂಡು ಬರುತ್ತಿದ್ದು    ಲಾರಿಯನ್ನು ಕುಂದಾಪುರ-ಉಡುಪಿ ರಾಷ್ಟ್ರೀಯ ಹೆದ್ದಾರಿ . 66 ರ ಪೂರ್ವ ಬದಿಯಲ್ಲಿ ಉಡುಪಿ ಕಡೆಗೆ ಮುಖ ಮಾಡಿ ನಿಲ್ಲಿಸಿ ಊಟಕ್ಕೆ ರಸ್ತೆ ದಾಟಿ ಬರುತ್ತಿದ್ದು, ಲಾರಿಯಲ್ಲಿ ನೋಡಿದಾಗ ಮರಳು ತುಂಬಿಕೊಂಡಿದ್ದು,  ಮತ್ತು ಲಾರಿಯಲ್ಲಿ 2 ಯುನಿಟ್‌ ‌‌‌‌‌‌‌‌ಮರಳನ್ನು ಯಾವುದೇ ಪರ್ಮಿಟ್‌ ‌‌‌‌ಇಲ್ಲದೆ ಕಳವು ಮಾಡಿಕೊಂಡು ಹೋಗುವುದಾಗಿ ಕಂಡು ಬಂದಿದ್ದು ಆತನಲ್ಲಿ ಮರಳಿನ ಬಗ್ಗೆ ವಿಚಾರಿಸಲಾಗಿದ್ದು ಮರಳನ್ನು ಗಂಗೊಳ್ಳಿ ಮೊವ್ವಾಡಿಯ ದಕ್ಕೆಯಿಂದ ಎಂದು ತಿಳಿಸಿರುತ್ತಾರೆ. ಮರಳಿನ ಮೌಲ್ಯ ರೂಪಾಯಿ 10,000/- ಆಗಿದ್ದು. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಪ್ರಕರಣ  ದಾಖಲಾಗಿದೆ

Exit mobile version