ಉಡುಪಿ ನ್ಯೂಸ್ ಪ್ಲಸ್

ಬಾರ್‌ಗೆ ನುಗ್ಗಿ ಕಳ್ಳತನ – ಪ್ರಕರಣ ದಾಖಲು

ಹೆಬ್ರಿಯ ಬೆಳ್ವೆ ಗ್ರಾಮದ ಗೋಳಿಯಂಗಡಿ ಲಕ್ಷ್ಮೀ ಬಾರ್ ಆ್ಯಂಡ್ ರೆಸ್ಟೋರೆಂಟ್‌ನ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಕ್ಯಾಶ್ ಕೌಂಟರ್‌ನ ಡ್ರಾವರ್ ನಲ್ಲಿಟ್ಟಿದ್ದ 50 ಸಾವಿರ ರೂ.ನಗದು ಕಳವು ಮಾಡಿಕೊಂಡು ಬಾರ್ ಮಾಲೀಕ ಕರುಣಾಕರ ಶೆಟ್ಟಿ ಪೊಲೀಸರಿಗೆ ದೂರು ನೀಡಿದ್ದಾರೆ.ಡಿ. 11ರಂದು ರಾತ್ರಿ ಬಾರ್‌ನ ಬಾಗಿಲು ಹಾಕಿ ಹೋಗಿದ್ದು, ಬೆಳಿಗ್ಗೆ 7;00 ಗಂಟೆ ಬಂದು ನೋಡುವಾಗ ಯಾರೋ ಕಳ್ಳರು ಬಾರ್‌ನ ಹಿಂಬದಿಯ ಗೋಡೆ ಹಾಗೂ ಕಿಟಕಿಯನ್ನು ಒಡೆದು ಒಳಪ್ರವೇಶಿಸಿ, ಕ್ಯಾಶ್ ಕೌಂಟ‌ನ ಡ್ರಾವರ್‌ನಲ್ಲಿಟ್ಟಿದ್ದ 50 ಸಾವಿರ ರೂ. ನಗದನ್ನು ಕಳವು ಮಾಡಿಕೊಂಡು ಹೋಗಿದ್ದಾರೆ.ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Exit mobile version