ಅದಮಾರು ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜು, ಪ್ರೌಢಶಾಲಾ ವಿಭಾಗ ಹಾಗೂ ಪ್ರಾಥಮಿಕ ಶಾಲಾ ವಿಭಾಗಗಳ ವಾರ್ಷಿಕೋತ್ಸವ , ಕಾರ್ಯಕ್ರಮದ ಉದ್ಘಾಟನೆ . ಕಾರ್ಯಕ್ರಮವನ್ನು ಪೂರ್ಣಪ್ರಜ್ಞಾ ಸಂಸ್ಥೆಯ ಕಾರ್ಯದರ್ಶಿ ಶ್ರೀಧರ್ ಕೆ ರಾವ್ ರವರು ಉದ್ಘಾಟಿಸಿದರು.ಸಂಸ್ಥೆಯ ಅಧ್ಯಕ್ಷ ಅದಮಾರು ಮಠಾಧೀಶ ಶ್ರೀ ಈಶ ಪ್ರಿಯತೀರ್ಥ ಸ್ವಾಮೀಜಿಯವರು ಸಂಸ್ಥೆಯ ವೆಬ್ಬೆಟ್ ಅನಾವರಣ ಗೊಳಿಸಿದರು.ವೇದಿಕೆಯಲ್ಲಿ ಸಿಎ ಗಣೇಶ್ ಹೆಬ್ಬಾರ್, ಹಳೆ ವಿದ್ಯಾರ್ಥಿಸಂಘದ ಅಧ್ಯಕ್ಷ ಉದಯ ಕೆ ಶೆಟ್ಟಿ ಎರ್ಮಾಳು, ನಿವೃತ್ತ ಪ್ರಾಂಶುಪಾಲ ರಾಮಕೃಷ್ಣ ಪೈ, ಪ್ರಾಂಶುಪಾಲ ಸಂಜೀವ ನಾಯಕ್, ಆರ್ ಶ್ರೀಕಾಂತ್ ರಾವ್, ಶ್ರೀಮತಿ ನಿಶ್ಮಿತಾ ಶೆಟ್ಟಿ ಶ್ರೀಮತಿ ಲಕ್ಷಿನಾಯಕ್, ಮತ್ತಿತರರು ಉಪಸ್ಥಿತರಿದ್ದರು.
