Site icon ಉಡುಪಿ ನ್ಯೂಸ್ ಪ್ಲಸ್

ಭೀತಿಯ ವಾತಾವರಣ ಸೃಷ್ಟಿಸಿದಾತ ಜಿಲ್ಲಾಸ್ಪತ್ರೆಗೆ ದಾಖಲು ಹಲ್ಲೆಗೆ ಯತ್ನ, ಅಂಬುಲೇನ್ಸ್ ಗಾಜು ಹುಡಿ.

ಉಡುಪಿ,ನ.10; ಶ್ರೀಕೃಷ್ಣ ಮಠದ ರಥಬೀದಿ ಪರಿಸರದಲ್ಲಿ ಭೀತಿ ವಾತಾವರಣ ಸೃಷ್ಟಿಸಿದಲ್ಲದೆ, ಪಾವಿತ್ರತೆಗೆ ಧಕ್ಕೆ ತರುತ್ತಿದ್ದ ವ್ಯಕ್ತಿಯನ್ನು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಜಿಲ್ಲಾಸ್ಪತ್ರೆಗೆ ದಾಖಲುಪಡಿಸಿರುವ ಘಟನೆ ಗುರುವಾರ ನಡೆದಿದೆ. ಈ ಸಂದರ್ಭ ವ್ಯಕ್ತಿಯು ಏಕಾಕಿ ವಿನಾಕಾರಣ ಕುಪಿತಗೊಂಡು ಅಂಬುಲೇನ್ಸ್ ವಾಹನದ ಹಿಂಬಾಗದ ಗಾಜು ಪುಡಿಗೈದಿದ್ದು, ಸಮಾಜಸೇವಕ ನಿತ್ಯಾನಂದ ಒಳಕಾಡು ಅವರ ಹಲ್ಲೆಗೆ ಮುಂದಾಗಿದ್ದ, ನಗರ ಪೋಲಿಸರ ತಕ್ಷಣದ ಸ್ಪಂದನೆಯಿಂದ ಒಳಕಾಡು ಅವರು ರಕ್ಷಿಸಲ್ಪಟ್ಟಿದ್ದಾರೆ. ವ್ಯಕ್ತಿಯ ಬಳಿ ಆಧಾರ್ ಚೀಟಿ ಪತ್ತೆಯಾಗಿದ್ದು, ಅದರಲ್ಲಿ ಕಾರ್ಯಪ್ಪ ಎಮ್.ಎಲ್.(41ವ) ತಂದೆ ಲೀಲಪ್ಪ ಬಸವನಹಳ್ಳಿ, ಸೋಮವಾರಪೇಟೆ ಎಂದು ವಿಳಾಸ ಉಲ್ಲೇಖವಿದೆ. ಸಂಬಂಧಿಕರು ಉಡುಪಿಯ ಜಿಲ್ಲಾಸ್ಪತ್ರೆ

Exit mobile version