ಉಡುಪಿ ನ್ಯೂಸ್ ಪ್ಲಸ್

ಹೆಜಮಾಡಿ ಗ್ರಾ. ಪಂ ವಿವಿಧ ಕಾಮಗಾರಿಗಳಿಗೆ 4 ಕೋಟಿ ರೂ ಅನುದಾನ

ಇಂದು ಮಾನ್ಯ ಶಾಸಕರಾದ ಲಾಲಾಜಿ ಆರ್ ಮೆಂಡನ್ ರವರು ಹೆಜಮಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 4 ಕೋಟಿ ರೂಗಳ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಾನ್ಯ ಶಾಸಕರು ಹೆಜಮಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 9 ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಲಾಗಿದ್ದು. ಬಿಜೆಪಿ ನೇತೃತ್ವದ ಹೆಜಮಾಡಿ ಗ್ರಾಮ ಪಂಚಾಯತ್ ಉತ್ತಮವಾಗಿ ಜನರ ಆಶೋತ್ತರಗಳಿಗೆ ಸ್ಪಂದಿಸುತಿದ್ದು ಪಂಚಾಯತ್ ಸದಸ್ಯರು ಜನರೊಂದಿಗೆ ನಿಕಟಸಂಪರ್ಕ ಹೊಂದಿದ್ದು ಜನಪರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈಗಾಗಲೇ ಪಂಚಾಯತ್ ವ್ಯಾಪ್ತಿಯಲ್ಲಿ ಹೆಚ್ಚಿನ ಮಟ್ಟದಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗಿದ್ದು ರಸ್ತೆ ಹಾಗೂ ಇನ್ನುಳಿದ ಕಾಮಗಾರಿಗಳ ಅಭಿವೃದ್ಧಿಗೆ ಈಗಾಗಲೇ 11 ಕೋಟಿ 61 ಲಕ್ಷ ಅನುದಾನ ಹಾಗೂ ಈ ಭಾಗದಲ್ಲಿ ಕರಾವಳಿ ಮೀನುಗಾರರ ಕನಸಾಗಿದ್ದ ಹೆಜಮಾಡಿ ಬಂದರು ನಿರ್ಮಾಣ ಕಾರ್ಯ ನಡೆಯುತ್ತಿದ್ದು ಸ್ಥಳೀಯರ ಸಹಕಾರದೊಂದಿಗೆ ಉತ್ತಮ ರೀತಿಯಲ್ಲಿ ಕೆಲಸ ಕಾರ್ಯ ಮಾಡಲಾಗುವುದು ಹಾಗೂ ಪಂಚಾಯತ್ ವ್ಯಾಪ್ತಿಯಲ್ಲಿ ಇನ್ನು ಹೆಚ್ಚಿನ ರೀತಿಯಲ್ಲಿ ಮುಂದಿನ ದಿನಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದರು

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು ಪಾಂಡುರಂಗ ಕರ್ಕೇರ, ಉಪಾಧ್ಯಕ್ಷರು ಪವಿತ್ರ ಗಿರೀಶ್, ಗ್ರಾಮ ಪಂಚಾಯತ್ ಸದಸ್ಯರಾದ ಶರಣ್ ಹೆಜಮಾಡಿ, ಪ್ರಾಣೇಶ್ ಹೆಜಮಾಡಿ, ಲಿಲೇಶ್ ಕುಮಾರ್, ಶಿವಕುಮಾರ್, ರೇಷ್ಮಾ ಮೆಂಡನ್, ಪ್ರಸಾದ್ ಹೆಜಮಾಡಿ, ರೋಷನ್, ವಸಂತಿ ವಿನೋದ್, ಸುಜಾತಾ, ನಳಿನಿ ಹಾಗೂ ಸ್ಥಳೀಯ ಮುಖಂಡರಾದ ಸುಧಾಕರ್ ಕರ್ಕೇರ, ನಿತಿನ್ ಕುಮಾರ್, ಅನಿಲ್ ಕುಂದರ್, ಕೀರ್ತನ್, ದೇವಕಿ, ಸಚಿನ್ ನಾಯಕ್, ಚಂದ್ರಹಾಸ ನಡೀಕುದ್ರು, ರಘುವಿರ ಸುವರ್ಣ, ಸತೀಶ್ ಕೋಟ್ಯಾನ್, ರವಿ ಕುಂದರ್, ಸುಕೇಶ್ ಸಾಲ್ಯಾನ್, ಸಂದೀಪ್ ಸುವರ್ಣ, ನೂತನ ಪುತ್ರನ್, ವಾಮನ ಕೋಟ್ಯಾನ್, ಹೆಚ್. ವಿ ಕೋಟ್ಯಾನ್, ಉಮೇಶ್ ಕೋಟ್ಯಾನ್, ನಿರಂಜನ್ ಪೂಜಾರಿ, ಸದಾನಂದ ಹಾಗೂ ಇಲಾಖೆ ಅಧಿಕಾರಿಗಳು, ಗುತ್ತಿಗೆದಾರರು, ಕಾರ್ಯಕರ್ತರು, ಸ್ಥಳೀಯರು ಉಪಸ್ಥಿತರಿದ್ದರು

ಶಿಲಾನ್ಯಾಸಗೊಂಡ ಕಾಮಗಾರಿಗಳು

1. ನಡಿಕುದ್ರು- ಪರಪಟ್ಟ ಬಳಿ ನದಿ ದಂಡೆ ಸಂರಕ್ಷಣೆ 2 ಕೋಟಿ
2. ಮಟ್ಟು ಮೊಗವೀರ ಸಭಾ ರುದ್ರಭೂಮಿ ಬಳಿ ನದಿದಂಡೆ ಸಂರಕ್ಷಣೆ 50 ಲಕ್ಷ
3. ಕೊಪ್ಪಳ ರಸ್ತೆ ಅಭಿವೃದ್ಧಿ 40 ಲಕ್ಷ
4. ಬ್ರಹ್ಮಸ್ಥಾನ ರಸ್ತೆ ಅಭಿವೃದ್ಧಿ 40 ಲಕ್ಷ
5. ನಡಿಕುದ್ರು ರಸ್ತೆ ಅಭಿವೃದ್ಧಿ 40 ಲಕ್ಷ
6. ಅಮಾವಾಸೆ ಕರಿಯ ಮಾರುತಿ ರಸ್ತೆ ಅಭಿವೃದ್ಧಿ 5 ಲಕ್ಷ
7. ಪ್ರಕಾಶ್ ಶೆಟ್ಟಿ ಮನೆ ಬಳಿ ಕಾಲು ಸಂಕ ನಿರ್ಮಾಣ 15 ಲಕ್ಷ
8. ಪಡುಕೆರೆ ಅಂಜನೇಯ ದೇವಸ್ಥಾನದ ಬಳಿ ಕಾಲು ಸಂತ ನಿರ್ಮಾಣ 5 ಲಕ್ಷ
9. ಪರಪಟ್ಟ ರಸ್ತೆ ಅಭಿವೃದ್ಧಿ 5 ಲಕ್ಷ

Exit mobile version