ಉಡುಪಿ ನ್ಯೂಸ್ ಪ್ಲಸ್

ಉದ್ಯಾವರ: ಭೀಕರ ಅಪಘಾತ-ಟ್ರಕ್ ಹರಿದು ಬೈಕ್ ಸವಾರ‌ ಸ್ಥಳದಲ್ಲೇ ಸಾವು

ಉದ್ಯಾವರ ಇಂದು  ನಡೆದ ಅಪಘಾತದಲ್ಲಿ ಬೈಕ್ ಸವಾರನ ಮೇಲೆ ಟ್ರಕ್ ಹರಿದು ವ್ಯಕ್ತಿಯೊರ್ವ ಸ್ಥಳದಲ್ಲೇ ಮೃತ ಪಟ್ಟ ಘಟನೆ ಉದ್ಯಾವರ ಸೇತುವೆ ಬಳಿ ನಡೆದಿದೆ. ಅಪಘಾತದಲ್ಲಿ ಮೃತರಾದ ದುರ್ದೈವಿ ಸರಕಾರಿಗುಡ್ಡೆ ನಿವಾಸಿ ರಫೀಕ್ ಎಂದು ತಿಳಿದುಬಂದಿದೆ. ಅವರು ಇಂದು ಕಟಪಾಡಿ ಕಡೆಯಿಂದ ಉಡುಪಿಗೆ ತಮ್ಮ ದ್ವಿಚಕ್ರ ವಾಹನದಲ್ಲಿ ಸಾಗುತ್ತಿರುವ ಸಂದರ್ಭ ಹಿಂದಿನಿಂದ ಬಂದ ಟ್ರಕ್ ಅವರ ಬೈಕ್ ಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ರಫೀಕ್ ಸ್ಥಳದಲ್ಲೇ ಸಾವನ್ನಾಪ್ಪಿದ್ದಾರೆ

Exit mobile version